Education

*ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಸಿಎಂ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಅಭ್ಯಸಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮೂವರು ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸನ್ಮಾನಿಸಿ ಬಹುಮಾನ ಘೋಷಿಸಿದರು.

ಸಂಜೀವ್ ಮುತ್ತಯ್ಯ, (ಪ್ರಥಮ ಸ್ಥಾನ )
ಚಿತ್ರ ದುರ್ಗ ಜಿಲ್ಲೆ.
ಎಸ್ ಎಸ್ ಎಲ್ ಸಿ ಯಲ್ಲಿ ಶೇ 96.8%. ಇವರಿಗೆ 2 ಲಕ್ಷ ರೂ ಬಹುಮಾನ.

ವೀರೇಶ್ ರಾಯಚೂರು ಜಿಲ್ಲೆ ಪಿಯುಸಿ ವಾಣಿಜ್ಯ ವಿಭಾಗದಲ್ಲಿ (ಪ್ರಥಮ ಸ್ಥಾನ )
ಶೇ. 95.16%. 2 ಲಕ್ಷ ರೂ ಬಹುಮಾನ.

ಲೋಹಿತ್ ನೀಲಪ್ಪ ಶಿನೋಬಿ ಬೆಳಗಾವಿ ಜಿಲ್ಲೆ
ವಿಜ್ಞಾನ ವಿಭಾಗದಲ್ಲಿ ಶೇ 95% (ತೃತೀಯ ಸ್ಥಾನ)
ಪಡೆದಿದ್ದಾರೆ. ಇವರಿಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಿದ ಸಿಎಂ.

Home add -Advt

ರಾಜ್ಯದಲ್ಲಿ ಒಟ್ಟು 12 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿದ್ದು, 2024-25ರಸಾಲಿನಲ್ಲಿ ಒಟ್ಟು 4534 ವಿದ್ಯಾರ್ಥಿಗಳು ವ್ಯಾಸಂಗ ಮಾಡಿರುತ್ತಾರೆ.

ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಧೀನದಲ್ಲಿ ಸ್ಥಾಪಿಸಿರುವ National education society for Tribal students (KESTS) ಮೂಲಕ ಕಾರ್ಯ ನಿರ್ವಹಿಸುತ್ತಿವೆ

ದೇಶವ್ಯಾಪಿ ಒಟ್ಟು 722 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿದ್ದು, 2024ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆದು ವಿದ್ಯಾರ್ಥಿಗಳ ವಿವರವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಪ್ರಕಟಿಸಿದೆ .

ಸಚಿವರಾದ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು
ಕಾರ್ಯಕ್ರಮದಲ್ಲಿ ಇಲಾಖೆ ಪರಿಶಿಷ್ಟ ಪಂಗಡಗಳ ಇಲಾಖೆ ಕಾರ್ಯದರ್ಶಿ ರಂದೀಪ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಉಪಸ್ಥಿತರಿದ್ದರು.

Related Articles

Back to top button