Karnataka NewsLatest

*ಕರೆಂಟ್ ಶಾಕ್ ಹೊಡೆದು ಇಂಜಿನಿಯರ್ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಇಂಜಿನಿಯರ್ ಓರ್ವರು ಕರೆಂಟ್ ಶಾಕ್ ಹೊಡೆದು ಕಂಪನಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

27 ವರ್ಷದ ಕೌಶಿಕ್ ಮೃತ ಇಂಜಿನಿಯರ್. ಜಿಗಣಿ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಯ್ರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ಯಾನಲ್ ಬೋರ್ಡ್ ತಯಾರಿಸುವ ವೇಳೆ ಕರೆಂಟ್ ಶಾಕ್ ಹೊಡೆದಿದೆ. ಗಂಭೀರವಾಗಿ ಗಯಗೊಂಡಿದ್ದ ಕೌಶಿಕ್ ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು.

Related Articles

ಆದರೆ ಮಾರ್ಗ ಮಧ್ಯೆಯೇ ಕೌಶಿಕ್ ಸಾವನ್ನಪ್ಪಿದ್ದಾರೆ. ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕರೆಂಟ್ ಶಾಕ್ ಗೆ ಇಂಜಿನಿಯರ್ ಬಲಿಯಾಗಿದ್ದಾರೆ ಎನ್ನಲಾಗಿದೆ. ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

Related Articles

Back to top button