
ಪ್ರಗತಿವಾಹಿನಿ ಸುದ್ದಿ: ಖೋಟಾನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಅಪ್ರಾಪ್ತ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರಸಿಕೆರೆ ಗ್ರಾಮದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರೆ ಸಮಯದಲ್ಲಿ ಶ್ರೀಮಾತ ಅಮ್ಯೂಸ್ ಮೆಂಟ್ ಪಾರ್ಕ್ ನ ಆಟಿಕೆ ಅಂಗಡಿಯೊಂದರಲ್ಲಿ ಅಪರುಚಿತರು 500 ರೂ ಮುಖಬೆಲೆಯ ಎರಡು ನೋಟುಗಳನ್ನು ಚಲಾವಣೆ ಮಾಡಿದ್ದರು. ಈ ಬಗ್ಗೆ ಆಟಿಕೆ ಅಂಗಡಿಯ ಮಾಲೀಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.
ಇದೀಗ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ರಿಹಾನ್(18) , ಮೊಹಮ್ಮದ್ ಅಖಿಲ್ (18), ನರೇಂದ್ರ ಪ್ರಸಾದ್(36), ಆಜಾದ್ ನಗರ ಬಾಬು(43), ಕುಮಾರಸ್ವಾಮಿ ಹಾಗೂ ಓರ್ವ ಬಾಲಕನನ್ನು ಬಂಧಿಸಲಾಗಿದೆ.



