Kannada NewsKarnataka NewsLatest

*ಮಗನನ್ನೇ ಹತ್ಯೆಗೈದ ತಂದೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನ ನಾರಾಯಣಪುರದಲ್ಲಿ ನಡೆದಿದೆ.

35 ವರ್ಷದ ಸುರೇಶ್ ತಂದೆಯಿಂದಲೆ ಕೊಲೆಯಾದ ಮಗ. ಯಲ್ಲಪ್ಪ ಕೊಲೆಗೈದ ಅರೋಪಿ. ಮಗ ಸುರೇಶ್ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.

ಎಂದಿನಂತೆ ಕುಡಿದು ಬಂದ ಮಗ ತಾಯಿಗೆ ಹೊಡೆಯುತ್ತಿದ್ದನಂತೆ. ಇದನ್ನು ತಪ್ಪಿಸಲು ಹೋದ ತಂದೆಯ ಮೇಲೂ ಸುರೇಶ್ ಕೈ ಮಾಡಿದ್ದಾನೆ. ತಂದೆ-ಮಗನ ನಡುವೆ ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೋಪದ ಬರದಲ್ಲಿ ತಂದೆ ಚಾಕುವಿನಿಂದ ಮಗನ ಕತ್ತಿಗೆ ಚುಚ್ಚಿದ್ದಾನೆ.

ಗಂಭೀರವಾಗಿ ಗಾಯಗೊಂಡ ಸುರೇಶ್ ನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button