
ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಮಗ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.
ನಿವೃತ್ತ ಯೋಧ ಇಸ್ಲಾಂ ಅರಬ್ (47) ಕೊಲೆಯಾಗಿರುವ ತಂದೆ. ಬೋಲು ಅರಬ್ ತಂದೆಯನ್ನೇ ಕೊಂದ ಆರೋಪಿ. ಮನೆಯಲ್ಲಿ ಸ್ಟ್ರಿಕ್ಟ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ.
ವಿವೇಕನಗರ ಪೊಲೀಸರು ಆರೋಪಿ ಬೋಲು ಅರಬ್ ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.