Latest

*ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ತಂದೆ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಪತ್ನಿ ಮೇಲಿನ ಅನುಮಾನಕ್ಕೆ ಪಾಪಿ ತಂದೆಯೊಬ್ಬ ತನ್ನ ಇಬ್ಬರು ಪುಟಾಣಿ ಮಕ್ಕಳನ್ನೇ ಕೊಂದ ಘಟನೆ ರಾಯಚೂರು ಜಿಲ್ಲೆಯ ಜಕ್ಕಲದೊಡ್ದಿ ಗ್ರಾಮದಲ್ಲಿ ನಡೆದಿದೆ.

5 ವರ್ಷದ ಶಿವರಾಜ್ ಹಾಗೂ 3 ವರ್ಷದ ರಾಜು ಕೊಲೆಯಾದ ಮಕ್ಕಳು. ನಿಂಗಪ್ಪ ಮಕ್ಕಳನ್ನೇ ಕೊಂದ ತಂದೆ. ಪತ್ನಿ ಪ್ರಭಾವತಿ ಮೇಲೆ ಸದಾ ಅನುಮಾನಪಡುತ್ತಿದ್ದ ಪತಿ ನಿಂಗಪ್ಪ, ನಿನ್ನೆ ಮಕ್ಕಳಿಬ್ಬರನ್ನು ಕೊಲೆಗೈದಿದ್ದಾನೆ.

ಅಜ್ಜ-ಅಜ್ಜಿಯನ್ನು ನೋಡಲು ಹೋಗೋಣ ಎಂದು ಮಕ್ಕಳನ್ನು ನಂಬಿಸಿ ಕರೆದೊಯ್ದ ತಂದೆ ನಿಂಗಪ್ಪ, ಬಳಿಕ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ದೇವದುರ್ಗ ಠಾಣೆ ಪೊಲೀಸರು ಆರೋಪಿ ನಿಂಗಪ್ಪನನ್ನು ಬಂಧಿಸಿದ್ದಾರೆ.

*ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button