Kannada NewsLatest

ಚಿಕ್ಕೋಡಿಯಲ್ಲಿ ನಕಲಿ ವೈದ್ಯರು: ಸರಕಾರದ ಅಸಲಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಕಲಿ ವೈದ್ಯರಿರುವುದು ಮತ್ತು ಅವರು ಜನರಿಗೆ ಮೋಸ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕೆಲವು ನಕಲಿ ವೈದ್ಯರು ವೈದ್ಯರೆಂದು ಹೇಳಿಕೊಂಡು ರೋಗಗಳನ್ನು ಗುಣಪಡಿಸುವುದಾಗಿ ಜನರಿಗೆ ಮೋಸ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎನ್ನುವ ಕವಟಗಿಮಠ ಅವರ ಪ್ರಶ್ನೆಗೆ ಡಾ.ಸುಧಾಕರ ಹೌದು ಎಂದು ಉತ್ತರಿಸಿದ್ದಾರೆ.

Home add -Advt

ಬೆಂಗಳೂರು ನಗರ, ವಿಜಯಪೂರ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ, ಗದಗ, ಚಿಕ್ಕಮಗಳೂರು, ಹಾವೇರಿ, ತುಮಕೂರು, ರಾಯಚೂರು, ಕೊಪ್ಪಳ, ಯಾದಗಿರಿಗಳಲ್ಲಿ ನಕಲಿ ವೈದ್ಯರಿಂದ ಜನರು ಮೋಸ ಹೋಗಿರುವ ಕುರಿತು ದೂರು ದಾಖಲಾಗಿದೆ. ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ 1669 ನಕಲಿ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರು ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಮುಚ್ಚಲಾಗಿದೆ ಎಂದು ಸುಧಾಕರ ತಿಳಿಸಿದ್ದಾರೆ.

Related Articles

Back to top button