Belagavi NewsBelgaum NewsKarnataka NewsLatest

*ಚೆನ್ನೈ ಪೊಲೀಸರು ಬೆಳಗಾವಿಗೆ ಬಂದಿದ್ದಾದರೂ ಯಾಕೆ? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ನಕಲಿ ಕಂಪನಿ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದಾರೆ.

ಅನಿಲ್ ಕೊಲ್ಲಾಪುರ, ರೋಹನ್ ಕಾಂಬಳೆ, ಸರ್ವೆಶ್ ಕಿವಿ ಬಂಧಿತ ಆರೋಪಿಗಳು. ತಮಿಳುನಾಡು ಪೊಲೀಸರ ಸೂಚನೆ ಮೇರೆಗೆ ಬೆಳಗಾವಿ ನಗರಕ್ಕೆ ಆಗಮಿಸಿದ ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬೆಳಗಾವಿ ಮೂರನೇ ಜೆ ಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿ ಚೆನ್ನೈಗೆ ಕರೆದೊಯ್ದಿದ್ದಾರೆ.

ಮೂವರು ಆರೋಪಿಗಳು ನಕಲಿ ಕಂಪನಿ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಜನರಿಗೆ ವಂಚಿಸಿದ್ದರು. ಆರೋಪಿಗಳ ಖಾತೆ ಮೂಲಕ 27 ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

Home add -Advt


Related Articles

Back to top button