Kannada NewsKarnataka NewsLatest

ಸಿಡಿಲು ಬಡಿದು ಜಾನುವಾರು ಸಾವು: ಚೆಕ್ ವಿತರಿಸಿದ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಸಿಡಿಲು ಬಡಿದು ಜಾನುವಾರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಸಂಬಂಧಿಸಿದ ಕುಟುಂಬಕ್ಕೆ ಚೆಕ್ ವಿತರಿಸಿದರು.
ಕಳೆದ ಜೂನ್ ತಿಂಗಳಲ್ಲಿ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸಿಡಿಲು ಬಡಿದು ಈರವ್ವಾ ಅಪ್ಪಯ್ಯಾ ಡಾಂಗೆ ಅವರಿಗೆ ಸೇರಿದ್ದ 2 ಜಾನುವಾರುಗಳು ಮೃತಪಟ್ಟಿದ್ದವು.
ಶಾಸಕ ಗಣೇಶ ಹುಕ್ಕೇರಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಜೋಡಕುರಳಿ ಗ್ರಾಮಕ್ಕೆ ತೆರಳಿ ಈರವ್ವಾ ಅವರಿಗೆ  ಶಾಸಕರು ಪರಿಹಾರದ ಚೆಕ್ ಹಸ್ತಾಂತರಿಸಿದರು. 

Related Articles

Back to top button