Uncategorized

*ಶ್ರೀಮತಿ ಗಂಗಮ್ಮ ಸೋಮಪ್ಪಾ ಬೊಮ್ಮಾಯಿ ಸಾಹಿತ್ಯ ಪ್ರಶಸ್ತಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ : 2020-22 ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ಶ್ರೀಮತಿ ಗಂಗಮ್ಮಾ ಸೋಮಪ್ಪಾ ಬೊಮ್ಮಾಯಿ ಪ್ರಶಸ್ತಿ ಪ್ರಕಟಿಸಲಾಗಿದೆ.

ಶ್ರೀಮತಿ ಗಂಗಮ್ಮ ಸೋಮಪ್ಪಾ ಬೊಮ್ಮಾಯಿ ಎಜುಕೇಶನಲ್ ಅಂಡ್ ವೆಲ್ ಫೇರ್ ಫೌಂಡೇಶನ್ ವತಿಯಿಂದ ನೀಡುವ ಪ್ರಶ್ತಿಗಳನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಅಕ್ಕ ಪ್ರಶಸ್ತಿಗೆ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಅಕ್ಕರದ ಸುಯಿಧಾನ ಕೃತಿ, ಜಾನಪದ ಸಿರಿ ಪ್ರಶಸ್ತಿಗೆ ಹೊರೆಯಾಲ ದೊರೆಸ್ವಾಮಿ ಅವರ ಜಾನಪದ ನಡೆನುಡಿ ಕೃತಿ ಆಯ್ಕೆಯಾಗಿದೆ. ಅರಳು ಮೊಗ್ಗು ಪ್ರಶಸ್ತಿಗೆ ಕುಮಾರಿ ನೇಹಾ ರಾಮಪುರ್ ಅವರ ಮ್ಯಾಜಿಕ್ ಪೆನ್ಸಿಲ್ ಕೃತಿ ಆಯ್ಕೆಯಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ಪ್ರತಿಯೊಂದು ಕೃತಿಗಳಿಗೆ ತಲಾ 25000 ರೂ ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button