Kannada NewsLatest

ಆಕಸ್ಮಿಕ ಬೆಂಕಿ: ಬಾಲಕಿ ಸಜೀವ ದಹನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಲ್ಲಿಯ ಅನಗೋಳದಲ್ಲಿ ಗುಡಿಸಲಿಗೆ ಕಳೆದ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಬಾಕಿಯೋರ್ವಳು ಸಜೀವ ದಹನವಾಗಿದ್ದಾಳೆ.

ರಘುನಾಥ ಪೇಠದಲ್ಲಿ ಈ ಘಟನೆ ನಡೆದಿದೆ. ಕಸ್ತೂರಿ ಎನ್ನುವ 8 ವರ್ಷದ ಬಾಲಕಿ ಬೆಂಕಿಗೆ ಬಲಿಯಾದವಳು.

ರಾತ್ರಿ ಅಪ್ಪ, ಅಮ್ಮನ ಜೊತೆ ಮಲಗಿದ್ದಾಗ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಅಪ್ಪ, ಅಮ್ಮ ಹೇಗೋ ಪಾರಾದರು ಮಗಳನ್ನು ರಕ್ಷಿಸುವ ಯತ್ನ ಸಫಲವಾಗಲಿಲ್ಲ.

Home add -Advt

Related Articles

Back to top button