Latest

ಕುಸಿದುಬಿದ್ದ ದೂಧ ಸಾಗರ ಕೇಬಲ್ ಸೇತುವೆ; 40 ಜನರ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಗೋವಾದ ದೂಧಸಾಗರ್ ಜಲಪಾತದಲ್ಲಿ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದುಬಿದ್ದಿದ್ದು 40 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಶುಕ್ರವಾರ ಸಂಜೆ ಭಾರೀ ಮಳೆಯ ನಡುವೆ ಜಲಪಾತದಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಈ ವೇಳೆ ಕೇಬಲ್ ಸೇತುವೆ ಏಕಾಏಕಿ ಕುಸಿತಕ್ಕೊಳಗಾಯಿತು.

ಈ ವೇಳೆ ಸೇತುವೆಯಲ್ಲಿ ಪ್ರವಾಸಿಗರಿದ್ದರು. ತಕ್ಷಣದಲ್ಲಿ ಕಾರ್ಯಪ್ರವೃತ್ತರಾದ  ರಿವರ್ ಲೈಫ್ ಸೇವರ್ ಗಳು ಸುಮಾರು 40  ಪ್ರವಾಸಿಗರನ್ನು ರಕ್ಷಿಸಿದ್ದಾರೆ.

ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಟ್ವೀಟ್ ಮಾಡಿದ್ದು ಜನರ ಜೀವ ರಕ್ಷಣೆ ಮಾಡಿದ ರಿವರ್ ಲೈಫ್ ಸೇವರ್ ಗಳಿಗೆ  ಧನ್ಯವಾದ ಸಲ್ಲಿಸಿದ್ದಾರೆ.

Home add -Advt

ಪ್ರಹ್ಲಾದ ಜೋಶಿಯವರನ್ನು ಹೊಗಳಿದ ರಾಜಸ್ಥಾನ್ ಮುಖ್ಯಮಂತ್ರಿ

Related Articles

Back to top button