Kannada NewsKarnataka News

ಸಾಂಬ್ರಾ ಜನರಿಗೆ ಗುಡ್ ನ್ಯೂಸ್: ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ನೂತನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು​ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ​ ಉದ್ಘಾಟಿಸಿದ​ರು.​
ಈ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರು​ ಹತ್ತಾರು ರೀತಿಯ ಸೇವೆಗಳನ್ನು ಪಡೆಯಬಹುದು.​ ವಿವಿಧ ಬಗೆಯ ಪ್ರಮಾಣ ಪತ್ರಗಳು, ಬಸ್, ರೈಲ್ವೇ ಹಾಗೂ ವಿಮಾನ ಟಿಕೆಟ್ ಗಳ​ನ್ನು ಪಡೆಯಬಹುದು., ಎಲ್ಲ ತರಹದ ಆನ್ ಲೈನ್ ​ಅರ್ಜಿಗಳನ್ನು ಭರ್ತಿ​ ಮಾಡಬಹುದು.​ ಇದರಿಂದಾಗಿ ಜನರ ಶ್ರಮ, ಸಮಯ ಉಳಿತಾಯವಾಗಲಿದೆ. ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಶಿವಕುಮಾರ ಬ್ಯಾಹಟ್ಟಿ, ರೂಪಾ ಶಿ ಬ್ಯಾಹಟ್ಟಿ, ಬಸಲಿಂಗಪ್ಪ ಅಕ್ಕತಂಗೇರಹಾಳ, ಗಂಗಾಧರ್ ತಿಮ್ಮಾಪೂರಮಠ್ ಮುಂತಾದವರು ಉಪಸ್ಥಿತರಿದ್ದರು.

*ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಆದೇಶ*

https://pragati.taskdun.com/murugha-mathaadalitadhikari-p-s-vastradappoint/

https://pragati.taskdun.com/the-development-of-belagavi-rural-sector-is-historic/

https://pragati.taskdun.com/inauguration-of-anganwadi-center-at-hirebagwadi/

*13 ವರ್ಷದ ಬಾಲಕಿ ಗರ್ಭಿಣಿ; ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ*

https://pragati.taskdun.com/hasana13-yers-girlgang-rape3-arrestedpocso-case/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button