Belagavi NewsBelgaum NewsLatest

*ದೂದ್ ಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು*

ಪ್ರಗತಿವಾಹಿನಿ ಸುದ್ದಿ: ಗೂಡ್ಸ್ ರೈಲು ಹಳಿತಪ್ಪಿರುವ ಘಟನೆ ಗೋವಾ-ಬೆಳಗಾವಿ-ಕಾರವಾರ ಗಡಿ ಭಾಗದ ದೀದ್ ಸಾಗರ್ ಬಳಿ ನಡೆದಿದೆ.

ಕಲ್ಲಿದ್ದಲು ತುಂಬಿಕೊಂಡು ಹೊರಟಿದ್ದ ಗೂಡ್ಸ್ ರೈಲು ದೂದ್ ಸಾಗರ್ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15ರ ಬಳಿ ಹಳಿ ತಪ್ಪಿದೆ. ವಾಸ್ಕೋದಿಂದ ಹೊಸಪೇಟೆಯ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸಲಾಗುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ.

ಒಂದು ಕಾರ್ಗೋ ಕೋಚ್, 11 ಬೋಗಿಗಳು ರೈಲ್ವೆ ಹಳಿಯಿಂದ ಜಾರಿಬಿದ್ದಿದ್ದು, ರೈಲ್ವೆ ಟ್ರ್ಯಾಕ್ ಮುರಿದು ಹೋಗಿದೆ. ಗೂಡ್ಸ್ ರೈಲು ಮಾರ್ಗದಲ್ಲಿ ಹಳಿ ತಪ್ಪಿರುವ ಪರಿಣಾಮ ಈ ಮಾರ್ಗದ ಯಶವಂತಪುರ-ವಾಸ್ಕೋಡಿ ಹಾಗೂ ವಾಸ್ಕೋಡಿ-ಯಶವಂತಪುರ ಎರಡು ರೈಲುಗಳನ್ನು ರದ್ದುಪಡಿಸಲಾಗಿದೆ.

ಇಂದು ಸಂಜೆ ಹೊರಡಲಿರುವ ಗೋವಾ ಎಕ್ಸ್ ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button