
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗಣೇಶೋತ್ಸವಕ್ಕೆ 5 ದಿನ ಇರುವಾಗ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಇದರನ್ವಯ ಸಾರ್ವಜನಿಕ ಸ್ಥಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಈ ಮೊದಲು ಸರಕಾರ ಸಂಪೂರ್ಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ನಿಷೇಧಿಸಿತ್ತು. ಕೇವಲ ಮನೆ ಮತ್ತು ದೇವಾಲಯಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಹುದೆಂದು ತಿಳಿಸಿತ್ತು. ಇದು ರಾಜ್ಯಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅನೇಕ ಕಡೆ ಪ್ರತಿಭಟನೆಗಳು ಆರಂಭವಾಗಿದ್ದವು.
ಇದೀಗ ಪರಿಷ್ಕೃತ ಆದೇಶ ಹೊರಬಿದ್ದಿದೆ. ಇದರನ್ವಯ ದೇವಸ್ಥಾನ, ಮನೆಗಳಲ್ಲಿ, ಸರಕಾರಿ ಜಾಗ, ಖಾ ಸಗಿ ಜಾಗ, ಸಾರ್ವಜನಿಕ ಬಯಲು ಪ್ರದಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುುದು ಎಂದು ತಿಳಿಸಲಾಗಿದೆ.
ಆದರೆ ಮೂರ್ತಿಯ ಎತ್ತರ ಗರಿಷ್ಠ ಮನೆಯೊಳಗೆ 2 ಅಡಿ, ಬಯಲು ಪ್ರದೇಶದಲ್ಲಿ 4 ಅಡಿ ಇರಬೇಕು. ಒಮ್ಮೆ 20 ಜನರಿಗಿಂತ ಹೆಚ್ಚು ಸೇರುವುದಕ್ಕೆ ಅವಕಾಶ ನೀಡಬಾರದು. ಅದೇ ರೀತಿಯಲ್ಲಿ ಆವರಣ ನಿರ್ಮಾಣ ಮಾಡಬೇಕು. ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ತಿಳಿಸಲಾಗಿದೆ.
ಸ್ಥಳೀಯ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯಬೇಕು. ಒಂದು ವಾರ್ಡಿಗೆ, ಒಂದು ಗ್ರಾಮಕ್ಕೆ ಒಂದೇ ಗಣೇಶ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಲಾಗಿದೆ. ಮೂರ್ತಿ ತರುವಾಗ ಅಥವಾ ವಿಸರ್ಜಿಸುವಾಗಿ ಮೆರವಣಿಗೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಥರ್ಮಲ್ ಸ್ಕ್ರೀನಿಂಗ್, ಸೆನಿಟೈಸೇಶನ್, ಸಾಮಾಜಿಕ ಅಂತರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಪರಿಷ್ಕೃತ ಆದೇಶ ಇಲ್ಲಿದೆ –