Kannada NewsKarnataka News

*ಗುಜರಾತ್ ವಿಮಾನ ದುರಂತ: ಇನ್ನೂ ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ*

ಪ್ರಗತಿವಾಹಿನಿ ಸುದ್ದಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ.

ಏರ್ ಇಂಡಿಯಾ ಎಐ-171 ಎಂಬ ಟಾಟಾ ಒಡೆತನಕ್ಕೆ ಸೇರಿದ ವಿಮಾನವು ಅಹಮದಾಬಾದ್ ನಿಂದ ಲಂಡನ್ ನತ್ತ ತೆರಳುತ್ತಿತ್ತು. ಆದರೆ ಇಂದು ಮಧ್ಯಾಹ್ನ 1.50 ರ ಸುಮಾರಿಗೆ ವಿಮಾನ ಟೇಕ್ ಆಫ್ ಆದ ಬಳಿಕ ಇಪ್ಪತ್ತು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಈ ವೇಳೆ ವಿಮಾನದ ಎಂಜಿನ್‌ನಲ್ಲಿ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಪೈಲಟ್ ಈ ವಿಷಯವನ್ನು ‘ಎಟಿಸಿ’ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ನಿರ್ಮಾಣ ಹಂತದ ಕಟ್ಟಡವಿರುವ ಜನ ವಸತಿ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದು ಬಂದಿದೆ.

ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಅವರು ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

Home add -Advt

ವಿಮಾನ ಮೊದಲು ಬಿ.ಜೆ.ಮೆಡಿಕಲ್ ಕಾಲೇಜು ಹಾಸ್ಟೆಲ್ ನ ಎರಡು ಕಟ್ಟಡಗಳಿಗೆ ಅಪ್ಪಳಿಸಿದೆ. ವಿದ್ಯಾರ್ಥಿಗಳು ಊಟಕ್ಕೆ ಕುಳಿತಿದ್ದ ವೇಳೆ ಈ ದುರಂತ ಸಂಭವಿಸಿದೆ. ಎರಡೂ ಕಟ್ಟಗಳು ಸುಟ್ಟು ಕರಕಲಾಗಿವೆ. ಕಟ್ಟಡಗಳಲ್ಲಿದ್ದ ವಿದ್ಯಾರ್ಥಿಗಳು, ಸಿಬ್ಬಂದಿಗಳು ಕೂಡ ಸಾವನ್ನಪ್ಪಿದ್ದಾರೆ. ವಿಮಾನ ದುರಂತ ನಡೆದು ಮೂರು ಗಂಟೆಗಳು ಕಳೆದರೂ ಈವರೆಗೂ ಸಾವು-ನೋವಿನ ಬಗ್ಗೆ ಲೆಕ್ಕಸಿಕ್ಕಿಲ್ಲ.

https://twitter.com/AmitShah/status/1933102380242882832?t=3j9nN9tUQM6eu6zfeTsvfA&s=08
https://twitter.com/CMofKarnataka/status/1933098388725117267?t=nCSOGO0rAGxoGMQF-b15Lw&s=08

Related Articles

Back to top button