Kannada NewsKarnataka NewsLatestPolitics

*HDK ಹಾರ್ಟ್ ಆಪರೇಷನ್ ಬಗ್ಗೆ ಶಾಸಕನ ಅನುಮಾನ*

ಅದು ಹೇಗೆ ಮೂರೇ ದಿನದಲ್ಲಿ ಹೊರ ಬಂದು ರಾಜ್ಯ ಸುತ್ತುತ್ತಾರೆ?

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಾರ್ಟ್ ಆಪರೇಷನ್ ಬಗ್ಗೆ ಶಾಸಕರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೆಚ್.ಡಿ.ಕೆ ಹಾರ್ಟ್ ಆಪರೇಷನ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಬಂದರೆ ಸಾಕು ಹೆಚ್ ಡಿಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತದೆ. ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ, ಅದು ಹೇಗೆ ಸಾಧ್ಯ? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Home add -Advt

ಸಚಿವ ಚಲುವರಾಯಸ್ವಾಮಿಗೆ ಇರುವ ಕಾಯಿಲೆ ಹೆಚ್ ಡಿಕೆಗೂ ಇದೆ. ಆದ್ರೆ ಚಲುವರಾಯಸ್ವಾಮಿ ಆಸ್ಪತ್ರೆ ಸೇರಿದ್ರೆ 1 ತಿಂಗಳು ಆಚೆ ಬರಲ್ಲ. ಹೆಚ್ ಡಿಕೆ ಹೇಗೆ ಆಪರೇಷನ್ ಆದ 2 ದಿನಕ್ಕೆ ಆಚೆ ಬರ್ತಾರೆ? ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಜನರ ಚುನಾವಣೆ ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಬಂಡಿಸಿದ್ದೇಗೌಡ ಕಿಡಿಕಾರಿದ್ದಾರೆ.


Related Articles

Back to top button