Karnataka News

ನಾನು ಫ್ರೀ ಬರ್ಡ್ ಎಂದ ಎಚ್. ವಿಶ್ವನಾಥ್

ಪ್ರಗತಿ ವಾಹಿನಿ ಸುದ್ದಿ, ರಾಯಚೂರು: ಕ್ಷಿಪ್ರ ಕ್ರಾಂತಿ ನಡೆಸಿ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರ ಕೆಡವಿದ್ದ  ಬಾಂಬೆ ಟೀಂ ನಲ್ಲಿ ಮೊದಲ ವಿಕೇಟ್ ಪಥನವಾಗಿದೆ. ಚುನಾವಣೆ ಸಮೀಪದಲ್ಲಿರುವಾಗ ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹಳ್ಳಿ ಹಕ್ಕಿ ಖ್ಯಾತಿಯ  ಹೆಚ್‌. ವಿಶ್ವನಾಥ್‌ಗೆ ಬಾಂಬೆ ಸ್ನೇಹಿತರು, ಬಿಜೆಪಿ ಪಕ್ಷದಿಂದ ದೂರ ಸರಿದಿದ್ದಾರೆ.
ಮಂತ್ರಾಲಯದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರೋ ಹೆಚ್‌.ವಿಶ್ವನಾಥ್, ಮಂತ್ರಾಲಯದಲ್ಲಿ ರಾಜಕೀಯದ ಪಥ ಬದಲಾಯಿಸಿದ್ದಾರೆ.
ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದಿದ್ದೇನೆ. ನನ್ನ ರಕ್ತನೇ ಕಾಂಗ್ರೆಸ್.  ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.
ಬಿಜೆಪಿ MLC ನಾನಲ್ಲ ಬಹಳ ಜನರಿಗೆ ಇದು ಗೊತ್ತಿಲ್ಲ. ನಾನು ಫ್ರೀ ಬರ್ಡ್‌ ಇದ್ದ ಹಾಗೆ. ನಾನು ಸಾಹಿತ್ಯ ಕ್ಷೇತ್ರದ ಎಂಎಲ್‌ಸಿ ಆಗಿದ್ದೇನೆ. ಬಿಜೆಪಿ ಎಂಎಲ್‌ಸಿ ಅಲ್ಲ ಎಂದು ಹೆಚ್‌. ವಿಶ್ವನಾಥ್ ತಿಳಿಸಿದ್ದಾರೆ.
https://pragati.taskdun.com/high-court-blocks-new-reservation-a-huge-setback-for-the-government/

Related Articles

Back to top button