
ಪ್ರಗತಿವಾಹಿನಿ ಸುದ್ದಿ: ಬೇಲೂರಿನಲ್ಲಿ ಪಾಳುಬಿದ್ದ ಕಟ್ಟಡ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೇರಿದೆ. ಮೃತ ಮಹಿಳೆ ಬೇಲೂರಿನ ಹೊಸನಗರ ನಿವಾಸಿ ಜ್ಯೋತಿ (45) ಎಂದು ಗುರುತಿಸಲಾಗಿದೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಚಿಕಿಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕುಸಿದ ಕಟ್ಟದ ಕೆಲಗೆ ಕುಳಿತು ಜ್ಯೋತಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು.ಕೆಲ ತಿಂಗಳ ಹಿಂದಷ್ಟೇ ಜ್ಯೋತಿ ಅವರ ಪತಿ ಕೂಶ ಸಾವನ್ನಪ್ಪಿದ್ದರು. ಇದೀಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.