Karnataka NewsLatest

*ಹುಬ್ಬಳ್ಳಿಯಲ್ಲಿ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ*

ಪ್ರಗತಿವಾಹಿನಿ ಸುದ್ದಿ: ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡವತಿಯಿಂದ ಆಗಸ್ಟ್ 11ರಂದು ಭಾನುವಾರ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ.

ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳು ರಾಮನಂದನ ಹೆಗಡೆ- ಚೇರ್ ಮೆನ್ ನಂದು ಕೆಮಿಕಲ್ಸ್ -ಹುಬ್ಬಳ್ಳಿ
ವಿಶೇಷ ಆಹ್ವಾನಿತರು: ಡಾ.ಶೃತಿ ಹೆಗಡೆ -ಮಿಸ್ ಯುನಿವರ್ಸಲ್ ಪಿಟೈಟ್-2024
ಶಿವರಾಮ್ ವಿ.ಹೆಗಡೆ ಹಿತ್ಲಳ್ಳಿ- ಉದ್ಯಮಿಗಳು-ಹುಬ್ಬಳ್ಳಿ
ಅಧ್ಯಕ್ಷತೆ: ವಿ.ಎಂ.ಭಟ್ – ಅಧ್ಯಕ್ಷರು- ಹವ್ಯಕ ಸಂಸ್ಥೆ

ಸಾಧಕರಿಗೆ ಸನ್ಮಾನ:
ಡಾ.ಗೋವಿಂದ ಹೆಗಡೆ- ವೈದ್ಯಕೀಯ ಕ್ಷೇತ್ರ
ಡಾ.ಜಿ.ಎಂ.ಹೆಗಡೆ-ಸಾಹಿತ್ಯ ಕ್ಷೇತ್ರ
ಶ್ರೀಕಾಂತ ಭಟ್-ಸಮಾಜಸೇವೆ

ಆಗಸ್ಟ್ 11ರಂದು ರವಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಅಡುಗೆ ಸ್ಪರ್ಧೆ, ಜಾನಪದ ಗೀತೆ, ಹವ್ಯಕ ಭೋಜನ, ಯಕ್ಷಗಾನ ತಾಳಮದ್ದಳೆ, ಧಾರವಾಡ ಯಕ್ಷ ಗೆಳತಿಯರಿಂದ ಭೂ ಕೈಲಾಸ ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button