Kannada NewsKarnataka NewsLatest

ಶಿವಾಲಯ ಜೀರ್ಣೋದ್ಧಾರ ಕಾಮಗಾರಿಗೆ ಹೆಬ್ಬಾಳಕರ್ ಚಾಲನೆ​ 

ಬೆಳಗಾವಿ – ಸರಸ್ವತಿ ನಗರದ ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿಯಲ್ಲಿ  ಶಿವಾಲಯ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.
ಸ್ಥಳೀಯ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂ​.​ಗಳ​ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೀಡಿದ್ದಾರೆ. ಶಾಸಕರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಜನರ ಬಹುದಿನದ ಅಪೇಕ್ಷೆ ಈಡೇರಿದಂತಾಗಿದೆ. 
ದೇವಸ್ಥಾನಗಳು ಜನರ ನಮ್ಮದಿಯ ಜೀವನಕ್ಕೆ ಕಾರಣವಾಗುತ್ತವೆ. ನಿರಂತರ ಪೂಜಾ ಕಾರ್ಯಗಳ ಮೂಲಕ ಜನರು ಸುಖ, ಶಾಂತಿಯಿಂದ ಬದುಕುವಂತಾಗಬೇಕು. ನಿವಾಸಿಗಳು ಒಮ್ಮನಸ್ಸಿನಿಂದ ಚರ್ಚಿಸಿ ತಮ್ಮ ಭಾಗದ ಕೆಲಸಗಳ ಬಗ್ಗೆ ಬೇಡಿಕೆ ಸಲ್ಲಿಸಿದರೆ ಅವುಗಳನ್ನು ಈಡೇರಿಸಲು ಸಿದ್ಧ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು. 
​  ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ದೇವಸ್ಥಾನದ ಕಮಿಟಿಯವರು, ಮೋಹನ್ ಸಾಂಬ್ರೆಕರ್, ಬೆಲ್ಲದ, ಸಿದ್ನಾಳ, ಯುವರಾಜ ಕದಂ, ಹಿರೇಮಠ, ತಾಂಜಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button