Karnataka NewsLatest

*ಕಾಫಿಗೆ ಬನ್ನಿ ಎಂದು ಕರೆದು ಬಟ್ಟೆ ವ್ಯಾಪಾರಿಗೆ ಹನಿಟ್ರ್ಯಾಪ್ ಬಲೆ ಬೀಸಿದ ಯುವತಿ: ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣೆ ಕಾನ್ಸ್ ಟೇಬಲ್ ಶಿವಣ್ಣ, ಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸುಂದರವಾದ ಯುವತಿಯರನ್ನು ಬಿಟ್ಟು ಹನಿಟ್ರ್ಯಾಪ್ ಮಾಡಿ ಹಣ ದೋಚುತ್ತಿದ್ದ ಜಾಲದಲ್ಲಿ ಕಾನ್ಸ್ ಟೇಬಲ್ ಶಿವಣ್ಣ ಭಾಗಿಯಾಗಿದ್ದ. ಇದೀಗ ಪೊಲೀಸರ ಅಥಿಥಿಯಾಗಿದ್ದಾನೆ.

ಬಟ್ಟೆ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಹೋಗಿ ತಾನೇ ಸಿಕ್ಕಿ ಹಕೈಕೊಂಡಿದ್ದಾನೆ ಪೊಲೀಸಪ್ಪ. ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ 10 ಲಕ್ಷ ರೂಪಾಯಿಯನ್ನು ಗ್ಯಾಂಗ್ ದೋಚಿತ್ತು. ಮೊದಲಿಗೆ ಯುವತಿಯೊಬ್ಬಳು ದಿನೇಶ್ ಕುಮಾರ್ ಅವರ ಬಟ್ಟೆ ಅಂಗಡಿಗೆ ತೆರಳಿ ಪರಿಚಯ ಮಾಡಿಕೊಂಡು ಫೋನ್ ನಂಬರ್ ಪಡೆದು ಬಂದಿದ್ದಾಳೆ.

ಬಳಿಕ ವಾಟ್ಸಾಪ್ ಚಾಟಿಂಗ್ ಶುರು ಮಾಡಿದ್ದಳು. ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಮನೆಯಲ್ಲಿ ಯಾರೂ ಇಲ್ಲ ಕಾಫಿಗೆ ಬನ್ನಿ ಎಂದು ಯುವತಿ ಆಹ್ವಾನಿಸಿದ್ದಾಳೆ. ಯುವತಿಯ ಮಾತಿಗೆ ಮರುಳಾದ ದಿನೇಶ್ ಕುಮಾರ್, ಆಕೆಯ ಮನೆಗೆ ಹೋಗಿದ್ದಾನೆ. ದಿನೇಶ್ ಕುಮಾರ್ ಯುವತಿ ಜೊತೆ ಮನೆಯಲ್ಲಿದ್ದ ವೇಳೆ ಕಾನ್ಸ್ ಟೇಬಲ್ ಶಿವಣ್ಣ ಹಾಗೂ ಮೂರ್ತಿ ಎಂಟ್ರಿ ಕೊಟ್ಟಿದ್ದಾರೆ. ದಿನೇಶ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

Home add -Advt

ಈ ವಿಷಯ ಯಾರಿಗೂ ಹೇಳಬಾರದು ಎಂದರೆ 10 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಬೇದಿಕೆ ಇಟ್ಟಿದ್ದಾರೆ. ಮರ್ಯಾದೆ ಪ್ರಶ್ನೆ ಎಂದು ದಿನೇಶ್, ತನ್ನ ಸಹೋದರನಿಗೆ ಹೇಳಿ 10 ಲಕ್ಷ ರೂಪಾಯಿ ಹಣ ತರಿಸಿ ಕೊಟ್ಟಿದ್ದಾನೆ. ಇದ್ದಕ್ಕಿದ್ದಂತೆ ತನ್ನ ಸಹೋದರ 10 ಲಕ್ಷ ಕೇಳಿದ್ದಕ್ಕೆ ಅನುಮಾನಗೊಂಡ ಸಹೋದರ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾನ್ಸ್ ಟೇಬಲ್ ಶಿವಣ್ಣ ಸೇರಿ ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Related Articles

Back to top button