Kannada NewsLatest

ಸನ್ಮಾನದ ಹಣವನ್ನು ಅನಾಥಾಶ್ರಮಕ್ಕೆ ನೀಡಿದ ಪ್ರೊ. ಹೊಸಮನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 
ರಾಣಿ  ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಕುಲಪತಿ  ಪ್ರೋ. ಶಿವಾನಂದ ಹೊಸಮನಿ ಅವರಿಗೆ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಸನ್ಮಾನ ಸಮಾರಂಭವನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಅವರ ಮಾರ್ಗದರ್ಶನದಂತೆ ಸತ್ಕಾರ ಸಮಾರಂಭದ ವೆಚ್ಚವನ್ನು ಸ್ವಾಮಿ ವಿವೇಕಾನಂದ ಅನಾಥಾಶ್ರಮಕ್ಕೆ ಸಹಾಯ ಧನವನ್ನಾಗಿ ನೀಡಿದರು. ಈ ವೇಳೆ ಮಾತನಾಡಿದ ಅವರು  ಆದಾಯದಲ್ಲಿ ಸ್ವಲ್ಪ ಹಣವನ್ನಾದರೂ ಸಮಾಜದ ಏಳಿಗೆಗಾಗಿ ಖರ್ಚು ಮಾಡುವಂತೆ ಕಿವಿಮಾತು ಹೇಳಿದರು. ಸನ್ಮಾನ ಸಮಾರಂಭದಲ್ಲಿ 20 ಕ್ಕೂ ಹೆಚ್ಚು ಕಾಲೇಜಿನ ಪ್ರಾಂಶುಪಾಲರುಗಳು ಮಾತನಾಡಿ ಕುಲಪತಿಗಳ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದರು.
 ಸಂಘದ ಅಧ್ಯಕ್ಷರಾದ ಪ್ರಾಚಾರ್ಯ ಡಾ. ನಾಗರಾಜ ಡಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಪ್ರಾಚಾರ್ಯ ಎಸ್. ಈ. ಸೊನ್ನದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಖಜಾಂಚಿ ಪ್ರಾಚಾರ್ಯ ಡಾ. ಎಸ್. ಎಸ್. ಪಾಟೀಲ ಕಾರ್ಯಕ್ರಮ ಸಂಯೋಜಿಸಿದರು, ಈ ಸಂದರ್ಭದಲ್ಲಿ ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟೆಯ ಜಿಲ್ಲೆಗಳ ಅನುದಾನಿತ ಕಾಲೇಜಿನ ಪ್ರಾಂಶುಪಾಲರುಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button