Kannada NewsKarnataka News

ಹೊಟೆಲ್ ಉದ್ಯಮಿ ರಾಮಣ್ಣ ಶೆರೆಗಾರ್ ನಿಧನ

ಹೊಟೆಲ್ ಉದ್ಯಮಿ ರಾಮಣ್ಣ ಶೆರೆಗಾರ್ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಪ್ರಸಿದ್ಧ ಹೊಟೆಲ್ ಉದ್ಯಮಿ ರಾಮಣ್ಣಾ ಪಿ.ಶೆರೆಗಾರ ನಿಧನರಾಗಿದ್ದಾರೆ.

ಬೆಳಗಾವಿ ಜನರ ಮನಗೆದ್ದಿರುವ ಅಜಂತಾ ಹೊಟೆಲ್ ಮಾಲಿಕರಾಗಿದ್ದ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದರು.

Home add -Advt

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಅವರು ಬೆಳಗಾವಿಗೆ ಬಂದು ಹೊಟೆ ಆರಂಭಿಸಿ ಯಶಸ್ತು ಕಂಡಿದ್ದರು. ಈಚೆಗಷ್ಟೆ ಮಂಗಳೂರಿನಲ್ಲೂ ಅಜಂತಾ ಹೆಸರಿನಲ್ಲಿ ಹೊಟೆಲ್ ಆರಂಭಿಸಿದ್ದರು.

ಅಜಂತಾ ಕೇವಲ ಹೊಟೆಲ್ ಆಗಿರದೆ ಬೆಳಗಾವಿ ಜನರಿಗೆ ಮೀಟಿಂಗ್ ನಡೆಸುವ ಸ್ಥಳವೂ ಆಗಿದೆ. ಅಲ್ಲಿಯ ದೊಸೆ, ಕಾಫಿ ಹೀರುತ್ತಾ ಗಂಟೆ ಗಟ್ಟಲೆ ಮೀಟಿಂಗ್ ನಡೆಸುವವರು ನೂರಾರು ಜನರಿದ್ದಾರೆ.

ಅವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ 8.30ಕ್ಕೆ ಹಿಂದವಾಡಿಯಲ್ಲಿ ನಡೆಯಲಿದೆ.

Related Articles

Back to top button