Kannada NewsKarnataka NewsLatest

*ದುಬಾರಿ ನಾಯಿಮರಿಗೆ ಹಠ ಹಿಡಿದ ಯುವಕ; ಮನೆ ಬಿಟ್ಟು ಹೋದ ತಾಯಿ; ಮುಂದೆ ಆಗಿದ್ದು ದುರಂತ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿ ಸಾಕುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಭಾರಿ ಬೆಲೆಯ ನಾಯಿಪ್ರೀತಿ ಇಲ್ಲೋರ್ವ ಯುವಕನನ್ನೇ ಬಲಿ ಪಡೆದ ವಿಚಿತ್ರ ಘಟನೆ ನಡೆದಿದೆ.

ಹುಬ್ಬಳ್ಳಿಯ ಮಿಷನ್ ಕಾಂಪೌಂಡ್ ನಲ್ಲಿ ಯುವಕನೊಬ್ಬ 2 ಲಕ್ಷ ಮೌಲ್ಯದ ದುಬಾರಿ ನಾಯಿಮರಿ ಕೊಡಿಸುವಂತೆ ತಾಯಿ ಬಳಿ ಹಠ ಹಿಡಿದಿದ್ದಾನೆ. ಮಗನ ಹಠಕ್ಕೆ ಬೇಸತ್ತ ತಾಯಿ ಅಂತಿಮವಾಗಿ ಮನೆಯನ್ನೇ ತೊರೆದು ಹೋಗಿದ್ದಾರೆ.

ತಾಯಿ ಮನೆ ಬಿಟ್ಟು ಹೋದ ಬಳಿಕ ಮನನೊಂದ ಯುವಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 24 ವರ್ಷದ ಅಲೆನ್ ವಿನೋದ್ ಭಸ್ಮೆ ಮೃತ ಯುವಕ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button