Karnataka News

*ಟವೆಲ್ ನಿಂದ ಕತ್ತುಬಿಗಿದು ಪತ್ನಿ ಹತ್ಯೆಗೈದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತಿಯ ಕತ್ತಿಗೆ ಟವೆಲ್ ಬಿಗಿದು ಕೊಲೆಗೈದಿರುವ ಘಟನೆ ಶಿವಮೊಗ್ಗ ಜಿಲೆಯ ಶಿಕರಿಪುರ ತಾಲೂಕಿನ ಅಂಬ್ಲಿಗೋಳದಲ್ಲಿ ನಡೆದಿದೆ.

28 ವರ್ಷದ ಗೌರಮ್ಮ ಕೊಲೆಯಾದ ಮಹಿಳೆ. ಮನೋಜ್ ಪತ್ನಿಯನ್ನೇ ಕೊಂದ ಪತಿ. ಆರೋಪಿ ಪತಿ ಪತ್ನಿಯ ಜೊತೆ ಜಗಳವಾಡಿದ್ದ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತಿ ಗೌರಮ್ಮಳ ಕತ್ತಿಗೆ ಟವೆಲ್ ನಿಂದ ಬಿಗಿದು ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button