Latest

*ಹೆತ್ತ ಮಗುವನ್ನೇ ಮೊಸಳೆಗಳ ನಾಲೆಗೆ ಬಿಸಾಕಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿಯ ಕ್ಷುಲ್ಲಕ ಜಗಳಕ್ಕೆ 6 ವರ್ಷದ ಮಗು ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿ ಗ್ರಾಮದಲ್ಲಿ ನಡೆದಿದೆ.

Related Articles

ಕ್ಷುಲ್ಲಕ ಕಾರಣಕ್ಕೆ ಪತಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿ ನಡುವೆ ಜಗಳ ನಡೆದಿದೆ. ಜಗಳದಿಂದ ಕೋಪಗೊಂಡ ಸಾವಿತ್ರಿ ಹೆತ್ತ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಬಿಸಾಕಿದ್ದಾಳೆ.

6 ವರ್ಷದ ಬಾಲಕ ವಿನೋದ್ ಮೊಸಳೆಗಳ ಬಾಯಿಗೆ ಬಲಿಯಾಗಿದ್ದಾನೆ. ಮಗನನ್ನು ಬಿಸಾಕಿದ ಬಳಿಕ ತಾಯಿಗೆ ತನ್ನ ದುಡುಕಿನ ಅರಿವಾಗಿದೆ. ಆದರೆ ಮಗ ಪ್ರಾಣಾಬಿಟ್ಟಿದ್ದಾನೆ.

ಮುಳುಗು ತಜ್ಞರು ನಾಲೆಯಲ್ಲಿದ್ದ ಬಾಲಕನ ಮೃತದೇಹವನ್ನು ಹೊರತೆಗಿದ್ದಾರೆ. ಮೊಸಳೆಗಳು ಬಾಲಕನ ಕೈ ತಿಂದಿರುವ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿಯನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button