Cancer Hospital 2
Beereshwara 36
LaxmiTai 5

ನನ್ನ ತಮ್ಮನಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ನನ್ನ ತಮ್ಮನಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಆದರೆ ಪಕ್ಷದಲ್ಲೇ ಇದ್ದುಕೊಂಡು ಜನ ಸೇವೆ ಮಾಡಲಿದ್ದಾರೆ ಎಂದು ಉಪ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಚನ್ನಪಟ್ಟಣ ಮರು ಚುನಾವಣೆ ಬಗ್ಗೆ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ಏನು ಬೇಕು ಎಂದು ನಮಗೆ ಗೊತ್ತಿದೆ. ಈಗ ಅಧಿಕಾರವಿದೆ ಚನ್ನಪಟ್ಟಣಕ್ಕೆ ಏನಾದರೂ ಒಳ್ಳೆಯದು ಮಾಡಬೇಕಿದೆ ಎಂದಿದ್ದಾರೆ.

Emergency Service

ಲೋಕಸಬಾ ಚುನಾವಣೆಯಲ್ಲಿ ಸುರೇಶ್‌ ಸೋತಿರಬಹುದು. ಆದರೆ ಅಲ್ಲಿ ನಮಗೆ ಮತ ನೀಡಿದ ಜನರನ್ನು ಕೈ ಬಿಡಲು ಆಗುವುದಿಲ್ಲ. ಅವರಿಗಾಗಿ ಏನಾದರೂ ಮಾಡಬೇಕಿದೆ. ಸದ್ಯಕ್ಕೆ ನನ್ನ ತಮ್ಮನಿಗೆ ಜನ ರೆಸ್ಟ್ ಮಾಡಲು ಹೇಳಿದ್ದಾರೆ. ಆದರೆ ಜನ ಸೇವೆ ಮುಂದುವರಿಯಲಿದೆ ಎಂದರು.

ಚನ್ನಪಟ್ಟಣದ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ. ಈವರೆಗೂ ಅವರು ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ. ಈಗ ನಮಗೆ ಒಳ್ಳೆಯ ಸಮಯವಿದೆ. ಹೀಗಾಗಿ ಚನ್ನಪಟ್ಟಣ ಅಭಿವೃದ್ಧಿಗೆ ಈಗ ಉತ್ತಮ ಅವಕಾಶವಿದೆ ಎಂದರು.

Bottom Add3
Bottom Ad 2