Kannada NewsKarnataka NewsLatest

ಬಿಜೆಪಿ ಸೇರುವ ಆಹ್ವಾನ ಧಿಕ್ಕರಿಸಿ ಹೈದರಾಬಾದ್ ಸಭೆಯಿಂದ ಹೊರಬಂದೆ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಅಥಣಿ – ಬಿಜೆಪಿ ಸೇರುವಂತೆ ನನಗೂ ಆಹ್ವಾನ ಬಂದಿತ್ತು. ಕೇಳಿ ನನ್ನ ಎದೆ ಝಲ್ಲೆಂದಿತು. ಹೈದರಾಬಾದ್ ನಲ್ಲಿ ನಡೆದ ಸಭೆಯಲ್ಲಿ ಬಂದ ಈ ಆಹ್ವಾನವನ್ನು ತಿರಸ್ಕರಿಸಿ ಸಭೆಯಿಂದ ಹೊರಬಂದೆ ಎಂದು ಕಾಂಗ್ರೆಸ್ ಪ್ರಭಾವಿ ನಾಯಕಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಹಿರಂಗಪಡಿಸಿದ್ದಾರೆ.
 ಅಥಣಿಯಲ್ಲಿ ಉಪಚುನಾವಣೆ ಪ್ರಚಾರದಲ್ಲಿರುವ ಲಕ್ಷ್ಮಿ ಹೆಬ್ಬಾಳಕರ್ ಈ ಕುರಿತ ವಿದ್ಯಮಾನವನ್ನು ಬಿಚಿಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೂ ಮುನ್ನವೇ ನನ್ನನ್ನು ಬಿಜೆಪಿ ಬರುವಂತೆ ನನಗೆ ಆಹ್ವಾನ ನೀಡಲಾಗಿತ್ತು ಎಂದು ಅವರು ಹೇಳಿದರು.
 ದೋಸ್ತಿ ಸರ್ಕಾರದ ರಚನೆಗೂ ಮುನ್ನವೇ ಗೋಕಾಕ್ ಮೂಲದ ದೊಡ್ಡವರು ನನ್ನನ್ನು ಹೈದರಾಬಾದ್ ನಲ್ಲಿ ಸಭೆ ಇದೆ ಎಂದು ಕರೆದು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದರು. ಅವರ ಮಾತನ್ನು ಕೇಳಿ ನನ್ನ ಎದೆ ಝಲ್ ಎಂದಿತು. ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲೂ ಬರುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರಬಂದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಬಂದು ಒಂದು ವಾರದಲ್ಲೇ ಕಾಂಗ್ರೆಸ್ ಬಿಡಲು ನಿರ್ಧರಿಸಿದ್ದ ಅವರಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button