Latest

ನಟ ದರ್ಶನ್ ರಿಂದ ಮೂವರ ಮೇಲೆ ಹಲ್ಲೆ; ಕೋಮಾ ಸ್ಟೇಜ್ ಗೆ ಜಾರುವಂತೆ ಥಳಿಸಿದ್ರಾ ಚಾಲೇಂಜಿಂಗ್ ಸ್ಟಾರ್..!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಹೋಟೆಲ್ ಸಪ್ಲೈಯರ್ ಮೇಲೆ ಮಾತ್ರವಲ್ಲ, ಇನ್ನಿಬ್ಬರ ಮೇಲೂ ದರ್ಶನ್ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಓರ್ವ ವ್ಯಕ್ತಿ ಕೋಮಾಗೆ ಹೋಗಿದ್ದಾನೆ ಎಂದು ವಿವರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಲಾಕ್ ಡೌನ್ ಜಾರಿಯಾದ ಸಂದರ್ಭದಲ್ಲೇ ಜೂನ್ 24 ಹಾಗೂ 25ರಂದು ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ದರ್ಶನ್ ಹಾಗೂ ಟೀಂ ಭರ್ಜರಿ ಪಾರ್ಟಿ ನಡೆಸಿದ್ದಾರೆ. ರಾತ್ರಿ 3ಗಂಟೆ ವೇಳೆ ಹೋತೆಲ್ ನಲ್ಲಿ ಗಲಾಟೆ ನಡೆದಿದೆ. ಈ ವೇಳೆ ದರ್ಶನ್ ಹೋಟೆಲ್ ಸಪ್ಲೈಯರ್ ಗಂಗಾಧರ್ ಎಂಬ ಕನ್ನಡಿಗನ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಳಿಕ ದರ್ಶನ್ ಹಾಗೂ ತಂಡವನ್ನು ಹೋಟೆಲ್ ನಿಂದ ಹೊರದಬ್ಬಲಾಗಿದೆ. ಸಿಬ್ಬಂದಿಗಳು ಕೆಲಸ ಬಿಡಲು ಮುಂದಾಗಿದದರೆ ಆದರೆ ಸಂದೇಶ್ ನಾಗರಾಜ್ ಸೇರಿದಂತೆ ಹೋಟೆಲ್ ಮಾಲೀಕರು ಸಿಬ್ಬಂದಿಗಳ ಮನವೊಲಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಶ್ರೀರಂಗಪಟ್ಟಣದ ಬಳಿಯ ದರ್ಶನ್ ತೋಟದ ಮನೆಯ ಕಾವಲುಗಾರನ ಮೇಲೂ ದರ್ಶನ್ ಹಾಗೂ ತಂಡ ಹಲ್ಲೆ ನಡೆಸಿದೆ. ಇನ್ನು ಗೋಪಾಲ್ ಅರಸ್ ಎಂಬಾತನನ್ನು ಜು.3ರಂದು ಮೈಸೂರಿನ ಸೋಷಿಯಲ್ಸ್ ಪಬ್ ನಲ್ಲಿ ಮನಬಂಧಂತೆ ದರ್ಶನ್ ಥಳಿಸಿದ್ದಾರೆ. ಹಲ್ಲೆಗೊಳಗಾದ ಗೋಪಾಲ್ ಅರಸ್ ಕೋಮಾದಲ್ಲಿದ್ದಾನೆ. ದರ್ಶನ್ ಹಾಗೂ ಗ್ಯಾಂಗ್ ನ ಇಂತಹ ಪಾಳೆಗಾರಿಕೆ ದೌರ್ಜನ್ಯ ಸಹಿಸುತ್ತಿರುವುದಾದರೂ ಯಾಕೆ? ದೊಡ್ಡ ಸೆಲೆಬ್ರಿಟಿ ಎಂದ ಮಾತ್ರಕ್ಕೆ ತಪ್ಪುಗಳ ಮೇಲೆ ತಪ್ಪು ಮಾಡುತ್ತಾ, ಅನ್ಯಾಯ ನಡೆಸುತ್ತಿದ್ದರೆ ಸುಮ್ಮನಿರಲು ಸಾಧ್ಯವೇ? ದೌರ್ಜನ್ಯಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದರೂ ನೋಡುತ್ತಾ ಕುಳಿತುಕೊಳ್ಳುವುದು ಸಾಮಾಜಿಕ ಜವಾಬ್ದಾರಿಯಲ್ಲ. ಹಲವು ಪ್ರಕರಣಗಳ ಬಗ್ಗೆ ನನ್ನ ಬಳಿ ಸಾಕ್ಷಿಗಳಿದ್ದು, ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆ ಮೇಲೆ ಆಸಿಡ್ ದಾಳಿ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button