Kannada NewsKarnataka NewsLatest
*ಕಾರು ರಿವರ್ಸ್ ತೆಗುವಾಗ ದುರಂತ: ಕಾರಿನ ಚಕ್ರದಡಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು*
ಪ್ರಗತಿವಾಹಿನಿ ಸುದ್ದಿ: ಕಾರು ರಿವರ್ಸ್ ತೆಗೆಯುವಾಗ ಒಂದೂವರೆ ವರ್ಷದ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾದನಾಯಕನಹಳ್ಳಿಯ ತೋಟದ ಗುಡ್ದದಹಳ್ಳಿಯ ಬೆನಕ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಮೋಹನ್ ಎಂಬುವವರ ಮಗ ನೂತನ್ ಮೃತ ಮಗು. ಮೋಹನ್ ಅವರ ಅಕ್ಕ-ಭಾವ ನಿನ್ನೆ ಕಾರಿನಲ್ಲಿ ಮನೆಗೆ ಬಂದಿದ್ದರು. ಇಂದು ಮಗು ಕಾರಿನ ಪಕ್ಕದಲ್ಲಿಯೇ ಆಟವಾಡುತ್ತಿದ್ದಾಗ ಕಾರು ಚಾಲಕ ಮಗುವನ್ನು ಗಮನಿಸದೇ ಏಕಾಏಕಿ ಕಾರು ರಿವರ್ಸ್ ತೆಗೆದಿದ್ದಾನೆ.
ಕಾರಿನ ಚಕ್ರದಡಿ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.



