Kannada NewsKarnataka NewsLatest
ಜಾರಕಿಹೊಳಿ ವರ್ಚಸ್ಸು ಹಳ್ಳಿಯಿಂದ ದಿಲ್ಲಿಯವರೆಗೆ ಪರಿಚಯವಾಗಬೇಕು – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸತೀಶ್ ಜಾರಕಿಹೊಳಿ ದೂರದೃಷ್ಟಿಯ ನಾಯಕರಾಗಿದ್ದು, ಅವರ ಆಚಾರ, ವಿಚಾರಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಭಾವವನ್ನು ಬೀರಿವೆ, ಈ ಪ್ರಭಾವಗಳು ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗಬಾರದು, ಅವರ ವರ್ಚಸ್ಸನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಪರಿಚಯಿಸಬೇಕಾಗಿದೆ. ಇದಕ್ಕೋಸ್ಕರ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಅವರನ್ನು ಸಂಸದರನ್ನಾಗಿಸಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರರೂ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ನಾಯಕತ್ವ, ನಿಸ್ವಾರ್ಥ ಸೇವೆ, ಸಮಾಜಮುಖಿ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶಕ, ಅವರೊಬ್ಬ ಶಾಂತಿ, ಸಂಯಮ ಹಾಗೂ ಶಿಸ್ತಿನ ಸಿಪಾಯಿ, ಯಾವಾಗಲೂ ಸಮಾಜದ ಬೆಳವಣಿಗೆಗಾಗಿ ಹಂಬಲಿಸುವ ಶ್ರಮಜೀವಿ, ಇಂತಹ ಶ್ರಮಜೀವಿಯನ್ನು ಸದಾಕಾಲವೂ ಬೆಂಬಲಿಸೋಣ ಎಂದೂ ಹೆಬ್ಬಾಳಕರ್ ಹೇಳಿದರು.
