Kannada NewsLatest

MES ನಿಷೇಧಿಸುವಂತೆ ಕರವೇ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಶಕಗಳಿಂದ ನಾಡದ್ರೋಹ ಕೆಲಸ ಮಾಡಿಕೊಂಡು ಬಂದಿರುವ ಎಂ ಇ ಎಸ್ ಸಂಘಟನೆಯನ್ನು ಈ ಕೂಡಲೇ ನಿಷೇದ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಆರ್ ಅಭಿಲಾಷ್ ಅವರ ನೇತೃತ್ವದಲ್ಲಿ ಎಂ ಇಎಸ್ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮನವರ ಹೆಸರು ಇಡುವಂತೆ, ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿಗಳನ್ನು ಸ್ಥಾಪಿಸುವಂತೆ ಹಾಗೂ ಸ್ಮಾರ್ಟ್ ಸಿಟಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಮಾಡುವಂತೆ ಕರವೇ ಕಾರ್ಯಕರ್ತರು ಒತ್ತಾಯಿಸಿದರು.

Home add -Advt

ಈ ವೇಳೆ ವಿನಯ ಚಂದರಗಿ, ಅನ್ನಸಾಹೇಬ್ ತೆಲಸಂಗ, ರಾಜು ಕಲಪತ್ರಿ, ಬಾಬು ಮಡಾಕರ್ ಇತರರು ಉಪಸ್ಥಿತರಿದ್ದರು.
ಬೆಳಗಾವಿ: ಮನೆ ಕುಸಿದು ತಾಯಿ, ಮಗ ಸಾವು; ಇನ್ನಿಬ್ಬರಿಗೆ ಗಂಭೀರ ಗಾಯ 

https://pragati.taskdun.com/latest/house-fell-down-in-belagavi-mother-child-dead/

Related Articles

Back to top button