Cancer Hospital 2
Beereshwara 36
LaxmiTai 5

*ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಕಿಚ್ಚ ಸುದೀಪ್ ಹೇಳಿದ್ದೇನು?*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ಮೊದಲು ನ್ಯಾಯ ಸಿಗಲಿ ಎಂದಿದ್ದಾರೆ.

Emergency Service

ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಅವರ ಕುಟುಂಬಕ್ಕೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು. ಮಾಧ್ಯಮಗಳು, ಪೊಲೀಸರು ಸತ್ಯಾಸತ್ಯತೆ ಹೊರ ತರುವ ಸಾಕಷ್ಟು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಜನರಿಗೆ ಕಾನೂನಿನ ಮೇಲೆ ನಂಬಿಕೆ ಬರುವ ಕೆಲಸವಾಗಬೇಕು ಎಂದು ಹೇಳಿದರು.

ಚಿತ್ರರಂಗದಿಂದ ನಟ ದರ್ಶನ್ ಬ್ಯಾನ್ ಮಾಡಬೇಕು ಎಂಬ ಪ್ರತಿಕ್ರಿಯಿಸಿದ ಸುದೀಪ್, ಇಲ್ಲಿ ದರ್ಶನ್ ವಿಚಾರ ಮುಖ್ಯವಲ್ಲ, ರೇಣುಕಾಸ್ವಾಮಿ ಕುಟುಂಬ ಕಣ್ಮುಂದೆ ಬರುತ್ತಿದೆ. ಆರೋಪಮುಕ್ತನಾದ ಮೇಲೆ ಬ್ಯಾನ್ ಮಾಡಲು ಆಗುತ್ತಾ? ಬ್ಯಾನ್ ಮಾಡುವುದಕ್ಕಿಂತ ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಫಿಲ್ಮ್ ಚೇಂಬರ್ ಮುಂದಾಗಲಿ ಎಂದು ಹೇಳಿದರು.

ತಪ್ಪು ಯಾರು ಮಾಡಿದ್ದಾರೆ ಯಾರು ಮಾಡಿಲ್ಲ ಎಂದು ನಾವು ಇಲ್ಲಿ ನಿಂತು ಜಡ್ಜ್ ಮಾಡಲು ನಾವು ಯಾರು? ತನಿಖೆ ನಡೆಯುತ್ತಿದೆ ಯಾರು ತಪ್ಪು ಮಾಡಿದ್ದಾರೆ ಶಿಕ್ಷೆಯಾಗಲಿ. ಮೃತನ ಕುಟುಂಬಕ್ಕೆ ನ್ಯಾಯ ಸಿಗಲಿ. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ನಾವ್ಯಾರೂ ದೇವರಲ್ಲ. ನಾವು ಏನು ಮಾಡಿದರೂ ಸರಿ, ತಪ್ಪೇ ಮಾಡಲ್ಲ ಎಂಬ ಮನೋಭಾವ ಯಾರಿಗೂ ಬೇಡ. ಮಾದ್ಯಮಗಳನ್ನು ನೋಡಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ಏನು ಮಾಡಬಾರದು ಎಂಬುದನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

Bottom Add3
Bottom Ad 2