Kannada NewsLatest

ತಂದೆ, ತಾಯಿ, ಹೆಂಡತಿ, ಮಗನನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡ

ತಂದೆ, ತಾಯಿ, ಹೆಂಡತಿ, ಮಗನನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡ

ಪ್ರಗತಿವಾಹಿನಿ ಸುದ್ದಿ, ಗುಂಡ್ಲುಪೇಟೆ-

ಇಲ್ಲಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಮೂಲತಃ ತುಮಕೂರಿನದ್ದಾಗಿದ್ದು, ಮೈಸೂರಿನಲ್ಲಿ ಬಿಸಿನೆಸ್ ನಡೆಸುತ್ತಿದ್ದರು.

ಓಂ ಪ್ರಕಾಶ ಎನ್ನುವ ಸುಮಾರು 36 ವರ್ಷದ ವ್ಯಕ್ತಿ ಡೇಟಾಬೇಸ್ ಸಂಸ್ಥೆಯನ್ನು ನಡೆಸುತ್ತಿದ್ದ. ನಂತರ ಆ್ಯನಿಮೇಶನ್ ಸಂಸ್ಥೆಯನ್ನೂ ಆರಂಭಿಸಿದ್ದ. ಆದರೆ ಎರಡೂ ನಷ್ಟಕ್ಕೀಡಾಗಿತ್ತು ಎನ್ನಲಾಗಿದೆ. ಕಳೆದ 3-4 ದಿನದಿಂದ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿದ್ದ ಕುಟುಂಬ ನಿನ್ನೆ ಗುಂಡ್ಲುಪೇಟೆಯ ಲಾಡ್ಜ್ ಗೆ ಶಿಫ್ಟ ಆಗಿತ್ತು,

ಇದನ್ನೂ ಓದಿ – ಗುಂಡು ಹಾರಿಸಿಕೊಂಡು ಐವರ ಸಾವು

ರಾತ್ರಿ ಸ್ನೇಹಿತನಿಗೆ ಫೋನ್ ಮಾಡಿ ನಾನು ನಂಬಿದವರೇ ನನಗೆ ಕೈಕೊಟ್ಟಿದ್ದಾರೆ. ಸಾಕಷ್ಟು ನಷ್ಟ ಅನುಭವಿಸಿದ್ದೇನೆ. ಜೀವನದಲ್ಲಿ ಸೋತಿದ್ದೇನೆ ಎಂದು ಓಂ ಪ್ರಕಾಶ ತಿಳಿಸಿ, ಗುಂಡ್ಲುಪೇಟೆಲ್ಲಿ ಕಾರು ನಿಲ್ಲಿಸಿದ್ದೇನೆ. ತೆಗೆದುಕ1ೊಂಡು ಹೋಗು ಎಂದು ತಿಳಿಸಿದ್ದನಂತೆ.

ಓಂ ಪ್ರಕಾಶ ತನ್ನ ತಂದೆ, ವೃತ್ತಿಯಲ್ಲಿ ಜ್ಯೋತಿಷಿಯಾಗಿದ್ದ ನಾಗರಾಜ ಆಚಾರ್ಯ, ತಾಯಿ ಹೇಮಾರಾಜು ಅವರಿಗೆ ಮೊದಲು ಗುಂಡು ಹಾರಿಸಿ ಸಾಯಿಸಿದ್ದ. ನಂತರ ಹೆಂಡತಿ ನಿಖಿತಾ (28) ಮತ್ತು ಮಗ ಆರ್ಯಾ (4)ನಿಗೂ ಗುಡು ರಾಸಿ ಕೊಲೆ ಮಾಡಿದ. ಆ ನಂತರ ತನ್ನ ಬಾಯಿಗೆ ರೈಫಲ್ ಇಟ್ಟುಕೊಂಡು ಗುಂಡು ಹಾರಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಬಿಸಿನೆಸ್ ನಲ್ಲಿ ಆಗಿರುವ ನಷ್ಟವೇ ಈ ಕುಟುಂಬದ ಇಂತಹ ನಿರ್ಧಾರಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಆದಾಗ್ಯೂ ತನಿಖೆಯ ನಂತರ ನಿಜ ವಿಷಯ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?

ವೀಡಿಯೋ, 32 ದಿನಗಳ ಅಂತರದಲ್ಲಿ ಸಾಹೋ, ಸೈರಾ ಬಿಡುಗಡೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button