Latest

*ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಕರಪತ್ರ ಅಭಿಯಾನ; ಮಾಜಿ ಸಿಎಂ ಸೋಲಿಸಲು ಷಡ್ಯಂತ್ರ*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಮುಂಬರುವ ವಿಧನಾಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕ್ಷೇತ್ರದಲ್ಲಿ ಕರಪತ್ರ ಅಭಿಯಾನ ಆರಂಭವಾಗಿದೆ.

ದಲಿತ ವಿರೋಧಿ ಸಿದ್ದರಾಮಯ್ಯ ಅವರನ್ನು ಕೋಲಾರದಿಂದಸೋಲಿಸಿ ಅವರಿಗೆ ದಲಿತ ಶಕ್ತಿ ತೋರಿಸಿ ಎಂಬ ಸಂದೇಶವಿರುವ ಕರಪತ್ರವನ್ನು ಕ್ಷೇತ್ರದಾದ್ಯಂತ ಹಂಚಲಾಗುತ್ತಿದೆ. ಈ ಮೂಲಕ ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕೋಲಾರ ಕ್ಷೇತ್ರದಾದ್ಯಮ್ತ ಕರಪತ್ರ ಅಭಿಯಾನ ನಡೆಯುತ್ತಿದ್ದು, ಹಿಂದಿನ ಚುನಾವಣೆಯಲ್ಲಿ ದಲಿತ ನಾಯಕರನ್ನು ಒಳ ಸಂಚು ಮಾಡಿ ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂಬ ಕೂಗು ಜೋರಾಗಿದೆ.

*ಭಾರಿ ಚಳಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ*

https://pragati.taskdun.com/karnataka-weathercold-waveone-week/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button