Latest

*ವಿಮಾನ ಆಯ್ತು ಈಗ KSRTC ಬಸ್ ನಲ್ಲಿ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಸಹ ಪ್ರಯಾಣಿಕ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ರಾಜ್ಯದ ಸಾರಿಗೆ ಬಸ್ ನಲ್ಲಿ ವ್ಯಕ್ತಿಯೊಬ್ಬ ಯುವತಿ ಮೇಲೆ ಇಂಥದ್ದೇ ವಿಲಕ್ಷಣ ಮೆರೆದ ಘಟನೆ ನಡೆದಿದೆ.

ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದೆ. ನಾನ್ ಸ್ಟಾಪ್ ಸ್ಲೀಪರ್ ಬಸ್ ನ್ನು ಹುಬ್ಬಳ್ಳಿ ಸಮೀಪ ಕಿರೇಸೂರು ಡಾಭಾದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ಬಳಿ ಬಂದ 32 ವರ್ಷದ ಪ್ರಯಾಣಿಕ ಆಕೆಯ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ. ಕಂಗಾಲಾದ ಯುವತಿ ಕಿರುಚಿದ್ದಾಳೆ.

ಯುವತಿ ಕೂಗಾಟಕ್ಕೆ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳು ಆಗಮಿಸಿದ್ದು, ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನನ್ನು ಸ್ಥಳದಲ್ಲೇ ಬಿಟ್ಟು ಬಸ್ ಪ್ರಯಾಣ ಮುಂದುವರೆಸಿದೆ. ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಬೇಡ ಎಂದಿದ್ದರಿಂದ ದೂರು ದಾಖಲಿಸಿಲ್ಲ ಎಂದು ಕೆ ಎಸ್ ಆರ‍್ ಟಿಸಿ ಸಿಬ್ಬಂದಿಗಳು ತಿಳಿಸಿದ್ದಾರೆ.

*7 ವೇತನ ಆಯೋಗ; ಸರ್ಕಾರಿ ನೌಕರರ ಪರ ಧ್ವನಿಯೆತ್ತಿದ ಮಾಜಿ ಸಿಎಂ ಯಡಿಯೂರಪ್ಪ*

Home add -Advt

https://pragati.taskdun.com/7th-pay-commissionb-s-yedyurappasupportvidhanasabhe/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button