Kannada NewsKarnataka NewsLatest

ದುಡಿಯುವ ವರ್ಗವೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಷೇತ್ರ, ಕ್ಷೇತ್ರದ ಜನರೇ ತಮಗೆ ಸರ್ವಸ್ವ ಎಂದು ತಿಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಇಂದು ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. 
ಮೋದಗಾ ಗ್ರಾಮಕ್ಕೆ ತೆರಳಿದ ಲಕ್ಷ್ಮಿ ಹೆಬ್ಬಾಳಕರ್ ಅಲ್ಲಿ ದುಡಿಯುತ್ತಿರುವ ನರೇಗಾ ಕಾರ್ಮಿಕರಿಗೆ ಊಟೋಪಹಾರದ ವ್ಯವಸ್ಥೆ ಮಾಡಿದರು. ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.
ನರೇಗಾ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗವೆಂದರ ನನ್ನ ಹೃದಯಕ್ಕೆ ಹತ್ತಿರ, ಅವರನ್ನು ಕಂಡನೆ ನನಗೆ ಎಲ್ಲಿಲ್ಲದ ಅಕ್ಕರೆ, ಅನುಕಂಪ. ಅವರ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಕೊರೋನಾ ಹಿನ್ನೆಲೆಯಲ್ಲಿ ನರೇಗಾ ಕಾರ್ಮಿಕರ ಕೆಲಸದ ಸಮಯದಲ್ಲಿ ವಿನಾಯಿತಿ ನೀಡಲು ಪ್ರಯತ್ನಿಸುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.
 ನರೇಗಾದಡಿ ದುಡಿಯುತ್ತಿರುವ ನನ್ನ ಅಕ್ಕತಂಗಿಯರಿಗೆ  ಕೊರೊನಾ ಅಟ್ಟಹಾಸದಿಂದ  ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಿದೆ. ಇವರ ಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇವತ್ತಿನ ದುಡಿಮೆ ಇವತ್ತಿನ ಊಟ ಎನ್ನುವಂತಹ ಪರಿಸ್ಥಿತಿ ಇದೆ. ಇವರ ದುಡಿಮೆಯೇ ಇವರ ಕುಟುಂಬಕ್ಕೆ ಆಧಾರ, ಇವತ್ತು ಈ ಎಲ್ಲ ಅಕ್ಕತಂಗಿಯರ ಜೊತೆ ಬೆರೆತು ಕಷ್ಟ, ಸುಖ ಹಂಚಿಕೊಳ್ಳುವುದರೊಂದಿಗೆ  ಹುಟ್ಟುಹಬ್ಬವನ್ನು ಕೂಡ ಹಂಚಿಕೊಳ್ಳುತಿದ್ದೇನೆ, ಕ್ಷೇತ್ರದಲ್ಲಿ  ದುಡಿಯುತ್ತಿರುವ ಇವರಿಗೆ ಏನಾದರೂ ತೊಂದರೆ, ಅನಾನುಕೂಲತೆಗಳು ಇದೆಯಾ ಎಂದು ವಿಚಾರಿಸಿ ನಿಮ್ಮೊಂದಿಗೆ ಸದಾಕಾಲವೂ ನಾನಿದ್ದೇನೆ ಎಂದು ಧೈರ್ಯವನ್ನು ತುಂಬಿದರು.
ಲಕ್ಷ್ಮಿ ಹೆಬ್ಬಾಳಕರ್ ಅವರು ತೋರುತ್ತಿರುವ ಪ್ರೀತಿಗೆ ಮನಸೋತ ಕಾರ್ಮಿಕರು, ತಮ್ಮ ಮನದಾಳದ ನೋವು, ನಲಿವುಗಳನ್ನು ಹಂಚಿಕೊಂಡರು. 
 
ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
 

Home add -Advt

Related Articles

Back to top button