GIT add 2024-1
Laxmi Tai add
Beereshwara 33

ಬೆಳಗಾವಿ ಜಿಲ್ಲೆಯಲ್ಲಿ ಮಳೆ; ಸೇತುವೆಗಳು ಮುಳುಗಡೆ; 12 ಗ್ರಾಮಗಳ ಸಂಪರ್ಕ ಕಡಿತ

ಜನಜೀವನ ಅಸ್ತವ್ಯಸ್ಥ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಜೂನ್ ತಿಂಗಳಿನಲ್ಲಿಯೇ ಪ್ರವಾಹ ಭೀತಿ ಆರಂಭವಾಗಿದೆ.

Emergency Service

ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲೂ ಭಾರಿ ಏರಿಕೆಯಾಗಿದೆ. ಒಂದೆಡೆ ಮೂಡಲಗಿ ತಾಲೂಕಿನ ಮೂರು ಸೇತುವೆಗಳು ಜಾಲಾವೃತಗೊಂಡಿದ್ದರೆ, ಇನ್ನೊಂದೆಡೆ ಚಿಕ್ಕೋಡಿ, ನಿಪ್ಪಾಣಿತಾಲೂಕಿನ ಸೇತುವೆಗಳು ಮುಳುಗಡೆಯಾಗಿದ್ದು 12 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮಮದಾಪುರ-ಹುನ್ನರಗಿ, ಭೋಜವಾಡಿ-ಕುನ್ನೂರು, ಭೀಮಶಿ-ಜತ್ರಾಟ, ಭೋಜ-ಕರದಗಾ, ಅಕ್ಕೋಳ-ಸಿದ್ನಾಳ, ವೇದಗಂಗಾ ಹಾಗೂ ದೂದಗಂಗಾ, ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನಸಂಪೂರ್ಣ ಅಸ್ತವ್ಯಸ್ಥಗೊಂಡಿವೆ.
ಗುರಿ ತಪ್ಪಿ ಕಾಲಿಗೆ ಬಿದ್ದ ಗುಂಡೇಟು; ವ್ಯಕ್ತಿ ಸಾವು

Bottom Add3
Bottom Ad 2