Kannada NewsKarnataka NewsNational

*ಗಣಿಯಲ್ಲಿ ಲಿಫ್ಟ್‌ ಹಗ್ಗ ತುಂಡಾಗಿ ಅವಘಡ: ಆಳದಲ್ಲಿ ಸಿಲುಕಿಕೊಂಡ 14 ಜನ*

ಪ್ರಗತಿವಾಹಿನಿ ಸುದ್ದಿ: ಕೋಲಿಹಾನ್ ಜಿಲ್ಲೆಯ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‍ನ ಗಣಿಯಲ್ಲಿ ಲಿಫ್ಟ್‌ನ ಹಗ್ಗ ತುಂಡಾಗಿ ಭಾರೀ ಅವಘಡ ಸಂಭವಿಸಿದೆ. ಲಿಫ್ಟ್‌ನಲ್ಲಿದ್ದ 12 ಜನ ಸೇರಿದಂತೆ ಒಟ್ಟು 14 ಜನರು ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ನಿನ್ನೆ ರಾತ್ರಿ ಈ ಅವಘಡ ಸಂಭವಿಸಿದ್ದು, ಕೋಲ್ಲತ್ತದಿಂದ ಆಗಮಿಸಿದ್ದ ವಿಜಿಲೆನ್ಸ್ ತಂಡ ಹಾಗೂ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‍ನ ಹಲವು ಅಧಿಕಾರಿಗಳು ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಅಧಿಕಾರಿಗಳು ಗಣಿಯಿಂದ ಮೇಲಕ್ಕೆ ಬರಲು ಲಿಫ್ಟ್ ಬಳಸಿದ್ದಾರೆ. ಈ ವೇಳೆ ಲಿಫ್ಟ್‌ನ ಹಗ್ಗ ತುಂಡಾಗಿದೆ. ಅಲ್ಲದೇ, ಅಧಿಕಾರಿಗಳನ್ನು ಮೇಲಕ್ಕೆ ಕರೆತರಲು ಬಳಸಲಾದ ಲಿಫ್ಟ್‌ನ ಮೇಲ್ಚಾವಣಿ ಕುಸಿದಿದ್ದು ಒಟ್ಟು 14 ಜನರು ನೂರಾರು ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದಾರೆ.

ಘಟನೆ ನಡೆದು 7-8 ಗಂಟೆಗಳಾಗಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಆಗಮಿಸಿದ್ದು, ವೈದ್ಯರು ಕೂಡ ಘಟನಾ ಸ್ಥಳದಲ್ಲಿದ್ದಾರೆ. ಬಿಜೆಪಿ ಶಾಸಕ ಧರ್ಮಪಾಲ್ ಗುರ್ಜಾರ್ ಅವರು ಸ್ಥಳದಲ್ಲಿದ್ದು, ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button