Kannada NewsKarnataka NewsPragativahini Special

ಗುಣಗಳ ಆಗರ ಗಣೇಶ

ವಿಶ್ವಾಸ ಸೋಹೋನಿ

ಗಣೇಶ ಹಿಂದೂ ಧರ್ಮದ ಪ್ರಮಖ ದೇವತೆಗಳಲ್ಲಿ ಒಬ್ಬ, ಭಾರತ ಮತ್ತು ನೇಪಾಳದಲ್ಲಿ ಪೂಜಿಸುವ ದೇವರು, ಭಾದ್ರಪದ ಮಾಸದಲ್ಲಿ ಬರುವ ಚೌತಿಯ ದಿನ ಗಣೇಶನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಓಂ ಗಣೇಶಾಯ ನಮೋ, ಓಂ ಗಂಗಣಪತೆಯೇ ನಮ: ಎಂಬ ಮಂತ್ರವನ್ನು ಅವನಿಗೋಸ್ಕರ ಹಾಡಲಾಗುತ್ತದೆ. ಅವನ ಕೈಗಳಲ್ಲಿ ಪರಶು, ಪಾಶ, ಅಂಕುಶ ಮತ್ತು ಕಮಲವನ್ನು ತೋರಿಸಲಾಗುತ್ತದೆ. ಅವನೊಂದಿಗೆ ಬುದ್ಧಿ-ರಿದ್ಧಿ-ಸಿದ್ಧಿಯನ್ನು ತೋರಿಸಲಾಗುತ್ತದೆ. ಅವನ ವಾಹನ ಇಲಿ. ಹಿಂದೂ ಪುರಾಣದ ಪ್ರಕಾರ ಗಣೇಶ ಶಿವ ಮತ್ತು ಪಾರ್ವತಿಯ ಮಗ. ಗಣೇಶನಿಗೆ ಕನ್ನಡದಲ್ಲಿ ಗಣೇಶ ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ, ತಮಿಳು ಭಾಷೆಯಲ್ಲಿ ವಿನಾಯಗರ್, ಪಿಳ್ಳಾಯರ್, ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮುಂಬೈ, ಪುಣೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ೫-೭-೧೧ ದಿನಗಳಿಂದ ಅನಂತ ಚತುರ್ದಶಿ ವರೆಗೆ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಯಾವುದೇ ಒಳ್ಳೆ ಕಾರ್ಯದ ಶುಭಾರಂಭ ಶ್ರೀಗಣೇಶ ನಿಂದ ಶುರುವಾಗುತ್ತದೆ. ವಿಘ್ನವಿನಾಶಕ, ದು:ಖಹರ್ತ ಸುಖಕರ್ತ, ಸಿದ್ದಿವಿನಾಯಕ ಮಹಿಮೆ ನಾವು ಆತಿಪ್ರೀತಿಯಿಂದ, ಸ್ನೇಹ ಮತ್ತು ಭಕ್ತಿ ಭಾವದಿಂದ ಮಾಡುತ್ತೆವೆ. ಆದರೇ ಅವನ ಮಹಿಮೆ ಮಾತ್ರ ಮಾಡಿದರೆ ಸಾಲದು, ನಾವು ಗಣೇಶನ ಸಮಾನ ಬುದ್ಧಿವಂತರು, ಗುಣವಂತರಾಗಬೇಕು. ಹೆಚ್ಚು ಜನಪ್ರಿಯನಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ ಗಣೇಶನಾಗಿದ್ದಾನೆ. ಎಲ್ಲಾ ಶುಭಕಾರ್ಯಗಳಲ್ಲೂ ಪ್ರಥಮ ಪೂಜೆ ಗಣಪತಿಗೆ ಸಲ್ಲುತ್ತದೆ. ಬೇರೆ ದೇವತಾ ಕಾರ್ಯವನ್ನು ಮಾಡುವಾಗ ನಿರ್ವಿಘ್ನ ಸಿದ್ಧಿಗಾಗಿ ಪ್ರಥಮ ಪೂಜೆ ಗಣೇಶನಿಗೆ ಸಲ್ಲಿಸಲಾಗುತ್ತದೆ.
ಒಂದು ದಿನ ಪಾರ್ವತಿ ತನ್ನ ದೆಹದ ಕೊಳೆಯಿಂದ ಬಾಲಕ ನಿರ್ಮಿಸಿ, ಅದ್ದಕ್ಕೆ ಪ್ರಾಣ ತಂಬಿ, ಯಾರು ಬಂದರೆ ಒಳಗಡೆ ಬಿಡಬಾರದು ಎಂದು ಹೆಳಿ ಸ್ನಾನಕ್ಕೆ ಹೊಗುತ್ತಾಳೆ. ಸ್ವಲ್ಪ ಸಮಯದ ನಂತರ ಶಂಕರ ಬಂದಾಗ ಮಗು ಒಳಗಡೇ ಹೋಗಲು ಬಿಡುವದಿಲ್ಲ. ಶಂಕರನಿಗೆ ಕೊಪಬಂದು ಬಾಲಕನ ಶಿರಚ್ಚೇದ ಮಾಡುತ್ತಾನೆ. ಪಾರ್ವತಿ ಹೊರಗಡೆ ಬಂದು ನೊಡಿ, ಅವಳ ಸಲಹೆಯಂತೆ ಆನೆಯ ತಲೆಯನ್ನು ಜೊಡಿಸಿ ಅದಕ್ಕೆ ಪ್ರಾಣ ತುಂಬಿ ಗಣೇಶೆಂಬ ನಾಮಕರಣ ಮಾದುತ್ತಾನೆ. ಇದು ಪೌರಾಣಿಕ ಕಥೆ. ಈ ಸಮಯದಲ್ಲಿ ನಿರಾಕಾರನಾದ ಭಗವಂತನು ನಮ್ಮಲ್ಲಿರುವ ದೆಹಾಭಿಮಾನ,ಅಹಂಕಾರದ ಶಿರವನ್ನು ಕತ್ತರಿಸಿ, ಬೇರೆ ಜ್ಞಾನ ಮತ್ತು ಶಕ್ತಿ ತುಂಬಿ ಆತ್ಮಾಭೀಮಾನದ ತಲೆಯನ್ನು ಜೊಡಿಸುತ್ತಾರೆ.
ಗಣಪತಿಯ ಶರೀರವು ವಿಚಿತ್ರವಾಗಿದೆ. ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟತೆಯನ್ನು ಹೊಂದಿದೆ. ಆನೆಯ ತಲೆ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿ ಪ್ರತೀಕವಾಗಿದೆ. ಏಕದಂತವು ಎಲ್ವಾ ದ್ವಂದಗಳನ್ನು ಮೀರಿ ನಿಲ್ಲುವ ಸಾಮರ್ಥ್ಯದ ಪ್ರತೀಕವಾಗಿದೆ. ವಿಶಾಲವಾದ ಕಿವಿಗಳು ವಿವೇಕ, ನೆರೆವು, ಸಹಾಯ ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೇ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಸೂಚಿಸುತ್ತದೆ. ಶ್ರೇಷ್ಠ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶ್ರವಣ-ಶಕ್ತಿಯ ಪ್ರಾಮುಖ್ಯತೆಯನ್ನು ವಿಶಾಲವಾದ ಕಿವಿಗಳು ಸೂಚಿಸುತ್ತವೆ. ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯಗಳ ನುಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಹಣೆಯ ಮೇಲೆ ಚಿತ್ರಿಸಲ್ಪಟ್ಟ ತ್ರಿಶೂಲವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲವನ್ನು ಸೂಚಿಸುತ್ತಾ, ಅವುಗಳ ಮೇಲೆ ಗಣೇಶನ ಪ್ರಭುತ್ವವನ್ನು ತೋರಿಸುತ್ತದೆ. ಗಣೇಶನ ದೊಡ್ಡ ಹೊಟ್ಟೆ ಪ್ರಪಂಚದ ದು:ಖ, ಸಂಕಟಗಳನ್ನೆಲ್ಲವನ್ನು ನುಂಗಿ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಗಣೇಶನ ಪಾದಗಳು ಇಹ ಮತ್ತು ಪರಲೋಕಗಳಲ್ಲಿ ಬಾಳುವ ಸಾಮರ್ಥ್ಯವನ್ನು ಸೂಚಿಸುತ್ತವೆ. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಇಲಿಯ ಮೇಲಿನ ಸವಾರಿಯು ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಹೊಂದಿರುವುದನ್ನು ಸೂಚಿಸುತ್ತದೆ. ಗಜಮುಖವು ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕವು ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.
ಅವನ ದೇಹ ದೇವನಾಗರಿ ಅಕ್ಷರದ ಓಂ ಅಕ್ಷರದಂತಿದೆ. ಹಾಗಾಗಿ ಗಣೇಶನನ್ನು ಓಂಕಾರ ಎಂದು ಕರೆಯುತ್ತಾರೆ. ಅವನ ವಿಶ್ವಕಲ್ಯಾಣದ ಸೇವೆಗಾಗಿ ಅವನಿಗೆ ವಿಶ್ವೋದ್ಧಾರಕ, ಜಗದೋದ್ಧಾರಕ ಎಂದು ಕರೆಯುತ್ತಾರೆ.
ಮಂಗಳಮೂರ್ತಿ ಗಣೇಶನ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ ಗಣಗಳ-ಸಮೂಹಗಳ ಅಧಿಪತಿ. ಗಣೇಶನನ್ನು ವಿಶ್ವದ ಮಾನವ ಸಮಾಜಕ್ಕೆ ಒಡೆಯ, ಸರ್ವಗುಣಗಳಧಾರಿ, ಸರ್ವವಿದ್ಯಾ ಪಾರಂಗತ, ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ದು:ಖಹರ, ಸುಖಕರ, ಲಂಬೋದರ, ವಿನಾಯಕ, ಗಜಮುಖ, ಮೂಷಕವಾಹನ, ಮೋದಕಪ್ರಿಯ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು, ದು:ಖವನ್ನು ದೂರಮಾಡಿ ಸುಖವನ್ನು ನೀಡುವುದರಿಂದ ದು:ಖಹರ-ಸುಖಕರನೆಂದು ಮಹಿಮೆ ಮಾಡಲಾಗುತ್ತದೆ. ಲಂಬೋದರ ಎಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸುವವನು ಎಂದರ್ಥ. ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕಗಳಾಗಿವೆ.
ಬದಲಾಗುತ್ತಿರುವ ಈ ವಿದ್ಯುನ್ಮಾನ ಯುಗದಲ್ಲಿ ಒಂದೆಡೆ ಭಕ್ತಿಯಲ್ಲಿ ಭಾವನೆ ಜಾಸ್ತಿ ಆಗುತ್ತಿದೆ. ಗಣೇಶನ ರೂಪವು ಬದಲಾಗುತ್ತಿದೆ. ಅಶ್ಲೀಲ ಹಾಡುಗಳು ಎಲ್ಲೆಡೆ ಕೇಳಿಬರುತ್ತಿವೆ. ಇದರಿಂದ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ. ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ ‘ಲೋಕಮಾನ್ಯ ತಿಲಕರು’ ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ಕರಾಳ ರೂಪವನ್ನು ತಾಳಿದೆ. ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಯು ನಡೆಯತ್ತಿವೆ. ಪ್ಲಾಸ್ಟ್‌ರ್ ಆಫ್ ಪ್ಯಾರೀಸ್ ರಾಸಾಯನಿಕ ಬಣ್ಣ ಮತ್ತು ಸಿಡಿಮದ್ದುಗಳಿಂದ ಪರಿಸರ ಮಾಲಿನ್ಯವಾಗುತ್ತz. ಅದ್ದರಿಂದ ಕರ್ನಾಟಕ ಸರಕಾರ ಪ್ಲಾಸ್ಟ್‌ರ್ ಆಫ್ ಪ್ಯಾರೀಸ್‌ನಿಂದ ಹಾಗೂ ರಾಸಾಯನಿಕ ಬಣ್ಣ ಗಳಿಂದ ಮಾಡಿರುವ ಮುರ್ತಿಗಳ ಮಾರಾಟ ನಿಷೆಧಿಸಿದೆ.
ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪ್ರತಿಯೊಂದು ಹಬ್ಬವನ್ನು ಅಲೌಕಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರ ಸತ್ಯಾಂಶವನ್ನು ನಿರಾಕಾರ ಪರಮಾತ್ಮನ eನದ ಆಧಾರದಿಂದ ತಿಳಿಸಿ ಆಚರಣೆಯಲ್ಲಿ ತರುವುದಕ್ಕೆ ಮಹತ್ವ ನೀಡಲಾಗುತ್ತದೆ.
ಗಣೇಶನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ, ಅದಕ್ಕೆ ಬಣ್ಣವನ್ನು ಹಚ್ಚಿ ಶೃಂಗಾರ ಮಾಡುತ್ತಾರೆ. ನಂತರ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೆಲವು ದಿನಗಳವರೆಗೆ ಪೂಜಿಸಿದ ನಂತರ ಗಣಪನ ವಿರ್ಸಜನೆ ಮಾಡುವರು. ಆಧ್ಯಾತ್ಮಿಕ ಜ್ಞಾನದಲ್ಲಿ ದೇಹವನ್ನು ಮಣ್ಣಿಗೆ ಹೋಲಿಸಲಾಗುತ್ತದೆ. ಈ ದೇಹವು ಪಂಚತತ್ವಗಳಿಂದ ಆಗಿದ್ದು, ಆತ್ಮವು ದೇಹ ತ್ಯಜಿಸಿದ ನಂತರ ಮತ್ತೆ ಪಂಚತತ್ವಗಳಲ್ಲಿ ಲೀನವಾಗುತ್ತದೆ. ಇದರ ಪ್ರತೀಕವಾಗಿಯೇ ಗಣೇಶನನ್ನು ಮಣ್ಣಿನಿಂದ ತಯಾರಿಸಿ ಮತ್ತೆ ಮಣ್ಣಿಗೆ ಸೇರಿಸಲಾಗುತ್ತದೆ. ನಾವು ಈ ದೇಹವಲ್ಲ, ನಾವು ಆತ್ಮ-ಜ್ಯೋತಿಗಳಾಗಿದ್ದೇವೆ. ನಮಗೆ ಜಾತಿಭೇದಗಳಿಲ್ಲ. ನಾವೆಲ್ಲರೂ ದಿವ್ಯಗುಣಗಳ ಶೃಂಗಾರ ಮಾಡಿಕೊಂಡಾಗ ಪೂಜೆಗೆ ಯೋಗ್ಯರಾಗುವೆವು. ಪಂಚ ವಿಕಾರಿಗುಣಗಳ ತ್ಯಾಗದಿಂದ ಮಾತ್ರ ದಿವ್ಯಗುಣಗಳ ಶೃಂಗಾರ ಮಾಡಿಕೊಳ್ಳಲು ಸಾಧ್ಯವಿದೆ. ಬ್ರಹ್ಮಚಾರಿ ವಿನಾಯಕನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಪತ್ನಿಯರನ್ನು ತೋರಿಸಲಾಗುತ್ತದೆ. ವಾಸ್ತವಿಕ ಇವರೆಬ್ಬರೂ ಗಣೇಶನ ವಿಶಾಲ ಬುದ್ಧಿ ಮತ್ತು ಸಿದ್ಧಿ ಪ್ರತೀಕವಾಗಿದ್ದಾರೆ.
ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿದಾತ ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆಯನ್ನು ಮಾಡುವ ವಾಡಿಕೆ ಇದೆ. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮeನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದ ಅಲ್ಲ, ಅದು ಗುಣವಾಚಕ ಶಬ್ದ. ಆತ್ಮವು ಶರೀರ ಬಿಟ್ಟು ಹೋದ ಮೇಲೆ, ದೇಹವು ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ಗಣೇಶನ ಹಾಗೆ ನಮ್ಮ ಜೀವನವು ನಾಲ್ಕು ದಿನದ ಬಾಳು ಆಗಿದೆ. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನ ಗುಣಗಳನ್ನು ಅಳವಡಿಸಿಕೊಂಡು, ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳಬೇಕು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button