Latest

*ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು*

ಪ್ರಗತಿವಾಹಿನಿ ಸುದ್ದಿ: ಪ್ರೇಮಿಗಳಿಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಅಂಜನಾಪುರದಲ್ಲಿ ನಡೆದಿದೆ.

ಅಂಜನಾಪುರದ ತುಳಸಿಪುರ ಕೆರೆಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್ (24) ಹಾಗೂ ಅಂಜನಾ (20) ಆತ್ಮಹತ್ಯೆ ಮಾಡಿಕೊಂಡವರು.

ಶ್ರೀಕಾಂತ್ ಬಿ.ಕಾಂ ಓದುತ್ತಿದ್ದ. ಅಂಜನಾ ಹಾಗೂ ಶ್ರೀಕಾಂತ್ ಪ್ರೀತಿಸುತ್ತಿದ್ದರು. ಕೋಣನಕುಂಟೆ ಠಾಣೆಯಲ್ಲಿ ಶ್ರೀಕಾಂತ್ ನಾಪತ್ತೆ ಬಗ್ಗೆ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೇ ವೇಳೆ ತಲಘಟ್ಟಪುರ ಠಾಣೆಯಲ್ಲಿ ಅಂಜನಾ ನಾಪತ್ತೆ ಕೇಸ್ ದಾಖಲಾಗಿತ್ತು. ಇದೀಗ ಯುವಕ-ಯುವತಿ ಇಬ್ಬರೂ ಡೆತ್ ನೋಟ್ ಬರೆದಿಟ್ಟು ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಉಲ್ಲೇಖಿಸಿ, ಇಬ್ಬರೂ ಕೆರೆಗೆ ಹಾರಿ ಸವಿಗೆ ಶರಣಾಗಿದ್ದಾರೆ.

Home add -Advt

Related Articles

Back to top button