Latest

ಗಾಂಧೀಜಿ ಪುತ್ಥಳಿ ಧ್ವಂಸ; ವೇದನೆ ವ್ಯಕ್ತಪಡಿಸಿದ ಭಾರತ

ಪ್ರಗತಿವಾಹಿನಿ ಸುದ್ದಿ, ದೆಹಲಿ: ಕೆನಡಾದ ರಿಚ್ಮಂಡ್ ಹಿಲ್ ನಲ್ಲಿ ಮಹಾತ್ಮಾ ಗಾಂಧೀಜಿ ಪುತ್ಥಳಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ತೀವ್ರ ವೇದನೆ ವ್ಯಕ್ತಪಡಿಸಿದೆ.

ಅಸಹನೆ, ದ್ವೇಷ ಭಾವನೆಯಿಂದ ಕೂಡಿದ ಈ ಘಟನೆ ವೇದನೆ ತಂದಿದ್ದು ಭಾರತೀಯ ಸಮುದಾಯದಲ್ಲಿ ಭಯ ಹುಟ್ಟಿಸುವ ಕೃತ್ಯವಾಗಿದೆ, ಅಷ್ಟೇ ಅಲ್ಲದೆ ಅಭದ್ರತೆಯ ಭಾವನೆ ಮೂಡುವಂತೆ ಮಾಡಿದೆ. ಈ ಕೃತ್ಯವೆಸಗಿದವರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಈಗಾಗಲೇ ಕೆನಡಿಯನ್ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿಕೊಂಡಿದೆ.

ರಿಚ್ಮಂಡ್ ಹಿಲ್ ನ ವಿಷ್ಣು ದೇವಸ್ಥಾನದ ಎದುರು ಇದ್ದ ಗಾಂಧೀಜಿ ಪುತ್ಥಳಿಯನ್ನು ಕೆಲ ದುಷ್ಕರ್ಮಿಗಳು ಬುಧವಾರ  ಧ್ವಂಸಗೊಳಿಸಿದ್ದರು. 30 ವರ್ಷಗಳ ಹಿಂದೆ ಸ್ಥಾಪಿಸಿದ ಈ ಪುತ್ಥಳಿಯನ್ನು ಈವರೆಗೆ ಯಾರೂ  ಧ್ವಂಸಗೊಳಿಸುವ ಕೆಲಸಕ್ಕೆ ಹೋಗಿರಲಿಲ್ಲ. ಈಗ ಆಗಿರುವ ಕೃತ್ಯ ದುರದೃಷ್ಟಕರ ಎಂದು ವಿಷ್ಣು ದೇವಸ್ಥಾನದ ಅಧ್ಯಕ್ಷ ಭೂಪೇಂದ್ರ ದುಬೆ ಹೇಳಿದ್ದಾರೆ.

ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್; ರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆ

Home add -Advt

 

Related Articles

Back to top button