Kannada NewsKarnataka News

ವ್ಯಕ್ತಿ ನಾಪತ್ತೆ :ಪತ್ನಿಯಿಂದ ದೂರು ದಾಖಲು

ಪ್ರಗತಿ ವಾಹಿನಿ ಸುದ್ದಿ,ಬೆಳಗಾವಿ: ವಡಗಾವಿಯ ಮಂಜುನಾಥ ಭೀಮರಾವ್ ಚೋಪಡಿ (35) ಎಂಬ ವ್ಯಕ್ತಿ ನಾಪತ್ತೆಯಾಗಿದ್ದು ಮಂಜುನಾಥ ಅವರ ಪತ್ನಿ ಅಮೃತಾ ಮಂಜುನಾಥ ಚೋಪಡಿ (26) ಶಹಾಪುರ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಗಂಡ ಮಂಜುನಾಥ ಭೀಮರಾವ ಚೋಪಡಿ, ವಡಗಾವಿಯ ಮಂಗಾಯಿ ನಗರ 3 ನೇ ಕ್ರಾಸ್ ಮನೆಯಲ್ಲಿ ಬಾಡಿಗೆ ಇದ್ದು, ಜನವರಿ 1ರಂದು ಮದ್ಯಾಹ್ನ 2 ಗಂಟೆಗೆ ಮನೆಗೆ ಬಂದು ಪುನಃ ಮದ್ಯಾಹ್ನ 3 ಗಂಟೆಗೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಅಮೃತಾ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಶಹಾಪೂರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಾಣೆಯಾದವರ ವಿವರ:
ಹೆಸರು: ಮಂಜುನಾಥ ಭೀಮರಾವ ಚೋಪಡಿ, 35 ವರ್ಷ, ಎತ್ತರ 5 ಪೂಟ 6 ಇಂಚು, ಕೋಲು ಮುಖ, ನೆಟ್ಟನೆ ಮೂಗು, ಸದೃಡ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾನೆ.

ತಿಳಿ ಕೇಸರಿ ಮತ್ತು ನೀಲಿ ಬಣ್ಣದ ಜಾಕೆಟ್, ಗುಲಾಬಿ ಬಣ್ಣದ ಟಿ-ಶರ್ಟ, ಬೂದು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ 0831-2405233, ಶಹಾಪೂರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ-0831-2405244 ಹಾಗೂ ಶಹಾಪೂರ ಪೋಲಿಸ್ ಠಾಣೆಯ ಪಿ. ಐ,. ಮೋ ನಂ; 9480804046 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಶಹಾಪೂರ ಪೋಲಿಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಚೇತನ ಪುತ್ರ ಪ್ರೇರಣಾ ಶಕ್ತಿ: ಶಶಿಕಲಾ ಜೊಲ್ಲೆ

https://pragati.taskdun.com/prerana-utsava-hekd-in-yaksamba/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button