
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಕಿಣೆಯೆ ಪಂಚಾಯತ ಪಿಡಿಓ ಮೇಲೆ ದರ್ಪ ತೋರಿದ್ದ ಮರಾಠಿ ಪುಂಡನನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕಿಣೆಯೆ ಗ್ರಾಮದ ತಿಪ್ಪಣ್ಣ ಡೊಕ್ರೆ ಎಂಬಾತನನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಪಿಡಿಓ ನಾಗೇಂದ್ರ ಪತ್ತಾರ ಮೇಲೆ ದರ್ಪ ತೋರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಮರಾಠಿ ಮಾತನಾಡುವಂತೆ ಅವಾಜ್ ಹಾಕಿದ್ದ. ಇದೀಗ ತಿಪ್ಪಣ್ಣ ಡೊಕ್ರೆಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.