Belagavi NewsBelgaum NewsKannada NewsKarnataka NewsPolitics

*ಮೀನುಗಾರರ ಕುಟುಂಬಕ್ಕೆ ಪರಿಹಾರ ನಿಧಿ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಯಮಕನಮರಡಿ ಗ್ರಾಮದ ದಿ. ಗುಡುಸಾಬ ಚಿಕ್ಕೋಡಿ ಇವರಿಗೆ ಮಂಜೂರಾದ ಮೀನುಗಾರಿಕೆ ಇಲಾಖೆ ಸಂಕಷ್ಟ ಪರಿಹಾರ ನಿಧಿ ಆದೇಶ ಪತ್ರ ವಿತರಣೆ ಮಾಡಿದರು. 

ಮಂಜೂರಾದ ರೂ 3.ಲಕ್ಷ ಗಳ ಆದೇಶ ಪತ್ರವನ್ನು ಮೃತರ ವಾರಸುದಾರ ಮಸಾಬಿ ಗುಡುಸಾಬ ಚಿಕ್ಕೋಡಿ ಮತ್ತು ಅಮಾನುಲ್ಲಾ ರಿಯಾಜ ಸೊಲ್ಲಾಪುರೆ ಇವರಿಗೆ ವೈದ್ಯಕೀಯ ವೆಚ್ಚ ರೂಪಾಯಿ 19581 ಆದೇಶ ಪತ್ರವನ್ನು ವಿತರಿಸಿದರು. 

ವಸಂತ ಹೆಗಡೆ ಮೀನುಗಾರಿಕೆ ಉಪ ನಿರ್ದೇಶಕರು ಬೆಳಗಾವಿ, ರಂಗನಾಥ್ ಶಿಂಧೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಚಿಕ್ಕೋಡಿ ಮತ್ತು ಅಬ್ದುಲ್ ಖಾಜಿ  ಕಾರ್ಯದರ್ಶಿ ಬಿಸ್ಮಿಲ್ಲಾ ಮೀನುಗಾರರ ಸಹಕಾರ ಸಂಘ, ನಿಂಗಪ್ಪ ಕೊಚ್ಚರಗಿ ಸಧ್ಯಸರು ಕ ರಾ ಮೀ ಸಂಕಷ್ಠ್ ಪರಿಹಾರ ನಿಧಿ ಸಮಿತಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button