Belagavi NewsBelgaum NewsKannada NewsKarnataka News

*ವ್ಯಕ್ತಿ ನಾಪತ್ತೆ: ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಖಾಸಬಾಗ ಶಾಂತಿ ಬಡಾವಣೆ 2ನೇ ಕ್ರಾಸ್‌ ನಿವಾಸಿಯಾದ ಮಂಜುನಾಥ ಮಲ್ಲಿಕಾರ್ಜುನ ಗುಡಿಪಾಡಿ(29) ಎಂಬುವವರು ಮನೆಯಿಂದ ನೇಕಾರಿಕೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಮೆನಗೆ ಬಾರದೆ ಕಾಣೆಯಾಗಿದ್ದರ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯು 5 ರಿಂದ ಅಡಿ ಎತ್ತರ, ದುಂಡು ಮುಖ, ಸದೃಢ ಮೈಕಟ್ಟು, ಸಾದಾ ಗಪ್ಪು ಮೈಬಣ್ಣ ಹೊಂದಿರುತ್ತಾನೆ. ಹಸಿರು ಬಣ್ಣದ ಟಿ-ಶರ್ಟ್ ಮತ್ತು ಕಷ್ಟು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಶಹಾಪೂರ ಪೊಲೀಸ್ ಠಾಣೆಯ ದೂರವಾಣಿ 08312405233, 08312405244,9480804046 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಶಹಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button