Kannada NewsKarnataka News

ಶಾಲಾ ಮಕ್ಕಳೊಂದಿಗೆ ಊಟ ಮಾಡಿ ಪ್ಲೇಟ್ ತೊಳೆದಿಟ್ಟ ಶಾಸಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಚನ್ನಮ್ಮ ನಗರದ ಸರಕಾರಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ,  ಮಕ್ಕಳೊಂದಿಗೆ ಬೆರೆತು, ಅವರೊಂದಿಗೆ ಊಟ ಮಾಡಿದರು. ನಂತರ ತಾವೇ ತಮ್ಮ ಪ್ಲೇಟ್ ತೊಳೆದು ಇಟ್ಟರು.
ಸರಕಾರಿ ಶಾಲೆಗೆ ಬರುವ ಬಡಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಭಾಗವಾಗಿ,  ಶಾಲೆಯ ಬಿಸಿ ಊಟ ಆಹಾರ ಗುಣಮಟ್ಟವನ್ನು  ಊಟ ಮಾಡಿ ಪರೀಕ್ಷಿಸಿದರು.  ಶಾಲೆಯ ಆವರಣದ ಸ್ವಚ್ಛತೆ,  ಶಾಲೆಯ ಮೂಲಭೂತ ಸೌಕರ್ಯಗಳ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು,  ಮಕ್ಕಳ ಸಾಹಿತ್ಯ,  ಇತ್ಯಾದಿಗಳ ಕುರಿತು ಮಾಹಿತಿ ಪಡೆದು ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳೊಂದಿಗೆ ಖುದ್ದಾಗಿ ಚರ್ಚೆ ನಡೆಸಿದರು.
    ಮಕ್ಕಳ ಗುಣಮಟ್ಟ, ಶಿಕ್ಷಣ ನೀಡಲು ಶಿಕ್ಷಕರ ಅಭಾವದ ಬಗ್ಗೆ ಶಾಲೆಯ ಮಕ್ಕಳು ತಮ್ಮ ಭಾವನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕರು,  ಈ ಸಮಸ್ಯೆ  ನಿವಾರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಶಿಕ್ಷಕರೊಂದಿಗೆ ಮಾತನಾಡಿ,  ಮಕ್ಕಳ ಸರ್ವಾಂಗೀಣ ವಿಕಾಸದಲ್ಲಿ ನಿಮ್ಮ ಯೋಗದಾನ ಮಹತ್ವದ್ದು,  ಹಾಗಾಗಿ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button