
ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಸಂಜೆ ಹಿರೇಬಾಗೇವಾಡಿಗೆ ತೆರಳಿ ಗ್ರಾಮ ದೇವಿಯ ಉಡಿ ತುಂಬಿದರು.

ಇದೀಗ ಗ್ರಾಮಕ್ಕೆ ತೆರಳಿ ಗ್ರಾಮದೇವಿಯ ಉಡಿ ತುಂಬಿ, ಜನರಿಗೆ ಆರೋಗ್ಯ ದಯಪಾಲಿಸುವಂತೆ ಪ್ರಾರ್ಥಿಸಿದರು. ಜನರು ನೆಮ್ಮದಿಯಿಂದ ಬಾಳುವಂತೆ, ಅವರ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲಿ ಎಂದೂ ಅವರು ದೇವಿಯಲ್ಲಿ ಕೇಳಿಕೊಂಡರು.
ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.