Kannada NewsKarnataka News

ಶ್ರೀರಾಮೋತ್ಸವದಲ್ಲಿ ಭಾಗಿಯಾದ ಶಾಸಕ ಶ್ರೀಮಂತ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಕಾಗವಾಡ –  ಕಾಗವಾಡ ಮತಕ್ಷೇತ್ರದ ಉಗಾರ ಬುದ್ರುಕ ಗ್ರಾಮದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾಗವಾಡ ಪ್ರಖಂಡದವರು ಆಯೋಜಿಸಿದ ಶ್ರೀ ರಾಮೋತ್ಸವ 2022 ಕಾರ್ಯಕ್ರಮದಲ್ಲಿ ಕಾಗವಾಡ ಮತಕ್ಷೇತ್ರದ  ಶಾಸಕರು ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ* ಅವರು  ರಾಮೋತ್ಸವದ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ, ಶ್ರೀರಾಮ ದೇವರ ದರ್ಶನವನ್ನು ಪಡೆದರು.
ಇದೇ ಸಮಯದಲ್ಲಿ ಶ್ರೀ ಹನುಮಾನ ಮಂದಿರಕ್ಕೆ ಭೇಟಿ ನೀಡಿ, ಹನುಮಾನ ದೇವರ ದರ್ಶನ ಪಡೆದರು.
 ಈ ಸಮಾರಂಭದಲ್ಲಿ ಕಾಗವಾಡ ಗುರುದೇವಾಶ್ರಮದ ಪ.ಪೂ ಶ್ರೀ ಯತೀಶ್ವರಾನಂದ ಮಹಾಸ್ವಾಮಿಗಳು, ಐನಾಪುರ – ಕೃಷ್ಣಾಕಿತ್ತೂರ ಶ್ರೀ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಬಸವೇಶ್ವರ ಮಹಾಸ್ವಾಮಿಗಳು, ಜಂಬಗಿಯ ಮಹಾ ಸಿದ್ದೇಶ್ವರ ಕರ್ಮಯೋಗಿ ಮಠದ ಶ್ರೀ ಸುರೇಂದ್ರ ಮಹಾರಾಜರು, ಮಂಗಸೂಳಿಯ ಶ್ರೀ ಗಿರಿಮಲ್ಲಿಕಾರ್ಜುನ ಆಶ್ರಮದ  ಶ್ರೀನಾಗಲಿಂಗ ಮಹಾಸ್ವಾಮಿಗಳು, ಮೋಳವಾಡದ  ಸುಭಾಸ ಶೇವಾಳೆ ಮಹಾರಾಜರು, ಅಥಣಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶೀತಲಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ನ ಉಪಾಧ್ಯಕ್ಷರಾದ ಡಾ. ಅಮೋಲ ಸರಡೆ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಎಲ್ಲ ಸದಸ್ಯರು, ಗ್ರಾಮದ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button